ದೆಹಲಿಯಲ್ಲಿ ಭೀಕರ ಕಾರು​​ ಸ್ಪೋಟ – 11 ಜನ ಬಲಿ, 30ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!

ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಕಾರ್​​ ಸ್ಪೋಟಕಕ್ಕೆ 11 ಜನ ಬಲಿಯಾಗಿದ್ದು, 30ಕ್ಕೂ ಹೆಚ್ಚು ಜನಕ್ಕೆ ಗಂಭೀರ ಗಾಯಗಳಾಗಿವೆ. ನಿನ್ನೆ ಸಂಜೆ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಈ ಭೀಕರ ಕಾರು ಸ್ಫೋಟವು ರಾಜಧಾನಿಯಲ್ಲಿ ಆತಂಕ ಸೃಷ್ಟಿಸಿದೆ.

ಮೃತದೇಹಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು, ಗಾಯಾಳುಗಳಿಗೆ LNJP ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ ಸ್ಫೋಟದ ತೀವ್ರತೆಗೆ ಮೆಟ್ರೋ ಸ್ಟೇಷನ್​ಗೂ ಹಾನಿಯಾಗಿದ್ದು, ಸ್ಫೋಟದ ಬೆನ್ನೆಲ್ಲೇ ಕೆಂಪುಕೋಟೆಯ ಪಾರ್ಕಿಂಗ್​​ ಕ್ಲೋಸ್​ ಮಾಡಲಾಗಿದೆ.

ಕೆಂಪುಕೋಟೆ ಬಳಿ ನಡೆದಿದ್ದು ಭಯೋತ್ಪಾದಕ ಕೃತ್ಯನಾ? ದೆಹಲಿಯ ಕೆಂಪುಕೋಟೆ ಬಳಿ ಬ್ಲಾಸ್ಟ್​ ಆಗಿದ್ದು ಐ-20 ಕಾರು. ಇದು ಫರೀದಾಬಾದ್​​ನ ಬದರ್​ಪುರ್​​ ಗಡಿಯಿಂದ ಬಂದಿತ್ತು. ದೆಹಲಿ ಬ್ಲಾಸ್ಟ್​​ಗೂ ಫರೀದಾಬಾದ್​ಗೂ ಲಿಂಕ್ ಇರೋದು​ ಬಹುತೇಕ ಖಚಿತವಾಗಿದೆ. ಹಾಗಾಗಿ ಇದೀಗ ಸ್ಫೋಟಕವಿಟ್ಟು ಬ್ಲಾಸ್ಟ್​​ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಿನ್ನೆ ಬೆಳಗ್ಗೆ ಫರೀದಾಬಾದ್​​ನಲ್ಲಿ 2,900 ಕೆಜಿ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿತ್ತು. ಕಾಶ್ಮೀರ ಮೂಲದ ವೈದ್ಯರು ಫರೀದಾಬಾದ್​ನಲ್ಲಿ ಅರೆಸ್ಟ್​ ಆಗಿದ್ದರು. ಬಂಧಿತ ಇಬ್ಬರ ಜೊತೆ ನಂಟಿದ್ದ ವ್ಯಕ್ತಿ ಉಮರ್ ಈ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಫೋಟಗೊಂಡ ಕಾರು ಕಾಶ್ಮೀರದಿಂದ ದೆಹಲಿಗೆ ಬಂದಿದ್ದೇಗೆ? ಐ-20 ಖಾಸಗಿ ಕಾರು ದೆಹಲಿ ಪ್ರವೇಶಿಸಿದ್ದೇಗೆ? ಸರಿಯಾಗಿ ಸಿಗ್ನಲ್​​ ಸ್ಟಾಪ್​​ ಸಮಯಕ್ಕೆ ಕಾರು ಬಂದಿದ್ದೇಗೆ? ಎಂಬ ಪ್ರಶ್ನೆ ಹುಟ್ಟಕೊಂಡಿದೆ. ಕೆಂಪುಕೋಟೆ ಬಳಿ ನಿಲ್ಲುತ್ತಿದ್ದಂತೆ ಕಾರು ಸ್ಪೋಟಗೊಂಡಿದೆ. ಇದು ಭಯೋತ್ಪಾದಕ ಕೃತ್ಯ ಎಂದು ದೆಹಲಿ ಪೊಲೀಸರು ಪರಿಗಣನೆ ಮಾಡಿದ್ದಾರೆ. ದೆಹಲಿ ಸ್ಪೋಟ ಉಗ್ರರ ದುಷ್ಕೃತ್ಯ ಎಂದು ಪರಿಗಣಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ FIR ದಾಖಳಾಗಿದ್ದು, ಉಗ್ರರ ದುಷ್ಕೃತ್ಯ ಎಂದು ಪರಿಗಣಿಸಿ NIA ತನಿಖೆಗಿಳಿದಿದೆ. ಸ್ಪೋಟಕ ಕಾಯ್ದೆ ಸೆಕ್ಷನ್​ 3, 4ರ ಅಡಿಯಲ್ಲೂ ತನಿಖೆ ನಡೆಸಲಾಗುತ್ತದೆ. ಕೃತ್ಯದ ಹಿಂದೆ ಜೈಷ್​​-ಎ-ಮಹಮ್ಮದ್​​ ಸಂಘಟನೆ ಕೈವಾಡ ಇರುವ ಶಂಕೆ ಇದೆ.

ಕೆಂಪುಕೋಟೆ ಬಳಿ ಸ್ಫೋಟಗೊಂಡ ಕಾರಿನ ಬಗ್ಗೆ ಪೊಲೀಸರ ತನಿಖೆ : ನಿನ್ನೆ ಮಧ್ಯಾಹ್ನ 3.19ಕ್ಕೆ ಕಾರು ಸುನೇಹ್ರಿ ಮಸೀದಿ ಬಳಿ ಬಂದಿತ್ತು. ಸುನೇಹ್ರಿ ಮಸೀದಿ ಪಾರ್ಕಿಂಗ್​ ಸ್ಥಳಕ್ಕೆ I-20 ಕಾರು ಎಂಟ್ರಿಯಾಗಿತ್ತು. ಸಂಜೆ 6.23ಕ್ಕೆ ಕಾರು​ ಪಾರ್ಕಿಂಗ್ ಲಾಟ್​ನಿಂದ ನಿರ್ಗಮಿಸಿತ್ತು, ನಂತರ ಸುಮಾರು 3 ಗಂಟೆಗಳ ಕಾಲ ಪಾರ್ಕಿಂಗ್​ ಲಾಟ್​​ನಲ್ಲಿತ್ತು. ಡಾ.ಉಮರ್​​ ಮೃತಪಟ್ಟ ಬಗ್ಗೆ ಭದ್ರತಾ ಪಡೆಗಳಿಗೆ ಅನುಮಾನ ಮೂಡಿಸಿದೆ, ಉಮರ್ ಫರೀದಾಬಾದ್​​ ವೈದ್ಯರ ಸಂಪರ್ಕದಲ್ಲಿದ್ದ.

ಫರಿದಾಬಾದ್​​ ಸ್ಫೋಟಕಕ್ಕೂ ದೆಹಲಿ ಸ್ಪೋಟಕಕ್ಕೂ ಲಿಂಕ್​? ಪೊಲೀಸರು ಸ್ಫೋಟಕಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದು, ಫರಿದಾಬಾದ್​ ಅಪರಾಧ ವಿಭಾಗದ ಪೊಲೀಸರಿಂದ ತನಿಖೆ ನಡೆಯುತ್ತಿದೆ. ದೆಹಲಿ ಪೊಲೀಸರು ಕಾಶ್ಮೀರ ಪೊಲೀಸರಿಂದ ಮಾಹಿತಿ ಕೇಳಿದ್ದು, ಅಮೋನಿಯಂ ನೈಟ್ರೇಟ್​ ಬಳಕೆ ಸಾಧ್ಯತೆ ಬಗ್ಗೆ ಪೊಲೀಸರಿಗೆ ಅನುಮಾನ ಹುಟ್ಟಿಕೊಂಡಿದೆ. ದೆಹಲಿ ಪೊಲೀಸರು ಕಾರಿನ ಮೂಲ ಕೆದಕುತ್ತಿದ್ದಾರೆ. ಪುಲ್ವಾಮಾ ಮೂಲದ ತಾರಿಕ್​ಗೆ ಸೇರಿದ HR 26 CE 7674 ನಂಬರ್​ನ ಕಾರು. ಕಾರ್​ ಡೀಲರ್​ನಿಂದ ತಾರಿಕ್​ I-20 ಖರೀದಿಸಿದ್ದ. ನಕಲಿ ದಾಖಲೆಗಳನ್ನು ನೀಡಿ ತಾರಿಕ್ ಕಾರು ಖರೀದಿಸಿದ್ದ. ಸದ್ಯ ತಾರಿಕ್ ಅನ್ನು​ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಾರಿಕ್ ಜಮ್ಮು-ಕಾಶ್ಮೀರದ ಫರಿದಾಬಾದ್​​ ನಿವಾಸಿ.

ಸ್ಫೋಟದ ತನಿಖೆ ವೇಳೆ ಶಾಕಿಂಗ್​ ವಿಚಾರ ಬಯಲಾಗಿದ್ದು, ಇಬ್ಬರು ಬಂಧನವಾಗ್ತಿದ್ದಂತೆ ದೆಹಲಿಯಲ್ಲಿ ಸ್ಫೋಟಗೊಂಡಿದೆ. ಡಾ.ಉಮರ್​​ ನಬಿ ಭಯಗೊಂಡು ಬ್ಲಾಸ್ಟ್ ಮಾಡಿರೋ​​ ಅನುಮಾನವಿದೆ. ಪೊಲೀಸರು ಉಗ್ರರ ನಂಟಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನು ದೆಹಲಿ ಕಾರ್​​ ಬ್ಲಾಸ್ಟ್ ನಿಂದಾಗಿ ಬೆಂಗಳೂರು ಪೊಲೀಸರು ಫುಲ್​ ಅಲರ್ಟ್ ಆಗಿದ್ದಾರೆ. ಮಜೆಸ್ಟಿಕ್​ ಸೇರಿ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ!

Btv Kannada
Author: Btv Kannada

Read More