ಬೆಂಗಳೂರು : ಫೋನ್ ಟ್ರ್ಯಾಪ್ ಆಗಿರೋ ಬಗ್ಗೆ ಹೆಚ್ಡಿಕೆ ದಾಖಲೆ ಕೊಡಲಿ, ಸರ್ಕಾರದಿಂದ ಫೋನ್ ಟ್ರ್ಯಾಪ್ ಆಗಿದೆ ಅಂದ್ರೆ ತನಿಖೆ ಮಾಡಿಸೋಣ. ಆಧಾರವಿಲ್ಲದೇ ಫೋನ್ ಟ್ರ್ಯಾಪ್ ಅಂದ್ರೆ ಆಗುತ್ತಾ..? ಎಂದು ಹೆಚ್ಡಿಕೆ ಬಾಂಬ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಫೋನ್ ಟ್ರ್ಯಾಪ್ ಮಾಡುವ ಕೆಲಸ ಆಗಿಲ್ಲ. ಕುಮಾರಸ್ವಾಮಿಯವರು ಸುಖಾಸುಮ್ಮನೆ ಆರೋಪ ಮಾಡ್ತಿದ್ದಾರೆ, ಅವರ ಬಳಿ ಸಾಕ್ಷ್ಯ ಇದ್ದರೆ ಕೊಡಲಿ ತನಿಖೆ ಮಾಡಿಸೋಣ. ಪ್ರಜ್ವಲ್ ರೇವಣ್ಣಗೆ ವಾರೆಂಟ್ ನೀಡಲಾಗಿದೆ, ಪಾಸ್ಪೋರ್ಟ್ ರದ್ದು ಮಾಡುವಂತೆಯೂ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ರಾಜತಾಂತ್ರಿಕ ಪಾಸ್ಪೋರ್ಟ್ ರದ್ದಾದ್ರೆ ಪ್ರಜ್ವಲ್ ವಿದೇಶದಲ್ಲಿರಲು ಆಗಲ್ಲ, ವಿದೇಶಾಂಗ ಇಲಾಖೆಯು ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ರದ್ದು ಮಾಡಲಿ. ವಾಪಸ್ ಬರಬೇಕಾದ ಅನಿವಾರ್ಯತೆ ಸಿಲುಕಲಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಪೋಟ ಕೇಸ್ : ಬೆಂಗಳೂರಿನ ನಾಲ್ಕು ಕಡೆ NIA ಅಧಿಕಾರಿಗಳ ದಾಳಿ..!