Download Our App

Follow us

Home » ರಾಜಕೀಯ » ಸರ್ಕಾರ ಬೀಳಿಸಲು ಬಿಜೆಪಿ ಯತ್ನ ಮಾಡಲ್ಲ, ಕಾಂಗ್ರೆಸ್​ನವರೇ ಸರ್ಕಾರ ಬೀಳಿಸಿಕೊಳ್ತಾರೆ : ಜಗದೀಶ್ ಶೆಟ್ಟರ್​..!

ಸರ್ಕಾರ ಬೀಳಿಸಲು ಬಿಜೆಪಿ ಯತ್ನ ಮಾಡಲ್ಲ, ಕಾಂಗ್ರೆಸ್​ನವರೇ ಸರ್ಕಾರ ಬೀಳಿಸಿಕೊಳ್ತಾರೆ : ಜಗದೀಶ್ ಶೆಟ್ಟರ್​..!

ಹುಬ್ಬಳ್ಳಿ : ಕಾಂಗ್ರೆಸ್​ನಲ್ಲಿ ಆಂತರಿಕ ಕಲಹ ಇದ್ದೇ ಇದೆ. ಅವರ ಕುರ್ಚಿ ಇವರು.. ಇವರ ಕುರ್ಚಿ ಅವರು ಎಳೀತಾರೆ. ಸರ್ಕಾರ ಬೀಳಿಸಲು ಬಿಜೆಪಿ ಯತ್ನ ಮಾಡಲ್ಲ. ಕಾಂಗ್ರೆಸ್​ನವರೇ ಸರ್ಕಾರ ಬೀಳಿಸಿಕೊಳ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಾಂಬ್ ಸಿಡಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಮಾತನಾಡಿ, ಏಕನಾಥ್​​​​ ಶಿಂಧೆ ಅವ್ರಿಗೂ ಮುನ್ನ ನಾನೇ ಹೇಳಿದ್ದೆ. ರಾಜ್ಯ ಕಾಂಗ್ರೆಸ್​ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಅನ್ನೋ ಗುಂಪಿದೆ. ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಚರ್ಚೆ ಮೊದಲಿಂದ ಇದೆ. ಸಿದ್ದರಾಮಯ್ಯ ಮೈತ್ರಿ ಸರ್ಕಾರ ಇದ್ದಾಗಲೂ ಸರ್ಕಾರ ಸುಭದ್ರ ಎಂದು ತಿಳಿಸಿದ್ದಾರೆ.

ಇದೇ ವೇಳೆ ಹುಬ್ಬಳ್ಳಿಯಲ್ಲಿ ನಡೆದಿರುವ ಹತ್ಯೆ ಬಗ್ಗೆ ಮಾತನಾಡಿ, ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ಕೊಲೆ ಆಗ್ತಿವೆ. ನೇಹಾ ನಂತರ ಅಂಜಲಿಯ ಕೊಲೆ ಆಯ್ತು. ಇಬ್ಬರನ್ನೂ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಂಜಲಿಯ ಮನೆಗೂ ನುಗ್ಗಿ ಚೂರಿಯಿಂದ ಇರಿಯಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಡಗೆಡುತ್ತಿದೆ ಎಂದು ತಿಳಿಸಿದ್ದಾರೆ.

ಅಪರಾಧ ಕೃತ್ಯಗಳಲ್ಲಿ ಬಾಗಿಯಾಗುವವರಿಗೆ ಕಠಿಣ ಕ್ರಮ ಆಗ್ತಿಲ್ಲ. ಸ್ಥಳೀಯವಾಗಿ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಸರ್ಕಾರವಾದರೂ ಹಂತಕರ ಮೇಲೆ ಕ್ರಮ ಕೈಗೊಳ್ಳಬೇಕು. ಇದ್ಯಾವುದೂ ಆಗದೇ ಇರೋದ್ರಿಂದ ಅಪರಾಧ ಹೆಚ್ಚಾಗಿದೆ ಎಂದು ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್​​​​ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಪತ್ನಿಗೆ ವಿಡಿಯೋ ಕಾಲ್​ ಮಾಡುತ್ತಲೇ ಪತಿ ಸಾವು – ಹೆದರಿಸಲು ಹೋಗಿ ಹೆಣವಾದ ಜಿಮ್​​ ಟ್ರೈನರ್​​​..!

Leave a Comment

DG Ad

RELATED LATEST NEWS

Top Headlines

ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್,

Live Cricket

Add Your Heading Text Here