ಬೆಂಗಳೂರು : ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೇರಿ ಅವರು 2024-25ನೇ ಸಾಲಿನ ಬಿಬಿಎಂಪಿ ಬೆಜೆಟ್ ಮಂಡನೆ ಮಾಡಿದ್ದಾರೆ. ಒಟ್ಟು 12,369 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ.
ವಿಶೇಷ ಕಮಿಷನರ್ 2.17 ಕೋಟಿ ಉಳಿತಾಯ ಬಜೆಟ್ ಮಂಡಿಸಿದ್ದು, ಸ್ವಂತ ಸಂಪನ್ಮೂಲಗಳಿಂದ 8,294 ಕೋಟಿ ಕ್ರೋಢೀಕರಣವಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ 4,077 ಕೋಟಿ ನಿರೀಕ್ಷೆಯಿದೆ. ಬ್ರ್ಯಾಂಡ್ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು, ಟೆಕ್ ಬೆಂಗಳೂರು, ವೈಬ್ರೆಂಟ್ ಬೆಂಗಳೂರುಗೆ ಬೃಹತ್ ಬಜೆಟ್ ಆದ್ಯತೆ ನೀಡಿದೆ. ಬ್ರ್ಯಾಂಡ್ ಬೆಂಗಳೂರಿಗೆ ಬಿಬಿಎಂಪಿ 1580 ಕೋಟಿ ಮೀಸಲಿಟ್ಟಿದೆ.
ಬಜೆಟ್ನಲ್ಲಿ ಏನಿದೆ ?
- ಜಾಹಿರಾತು ಮೂಲಕ 500 ಕೋಟಿ ನಿರೀಕ್ಷೆ
- ಆಸ್ತಿ ತೆರಿಗೆ ಸಂಗ್ರಹಕ್ಕೆ ನಮ್ಮ ಸ್ವತ್ತು ತಂತ್ರಾಂಶ ಜಾರಿ
- 16 ಸಾವಿರ ಪೌರ ಕಾರ್ಮಿಕರ ನೇಮಕಕ್ಕೆ ನಿರ್ಧಾರ
- ಟ್ರಾಫಿಕ್ ಸುಧಾರಣೆಗೆ 200 ಕೋಟಿ ವೆಚ್ಚದ ಸುರಂಗ ಮಾರ್ಗ.
- ರಸ್ತೆಗಳ ಅಗಲೀಕರಣಕ್ಕೆ 130 ಕೋಟಿ.
- ರಾಜಕಾಲುವೆ ಬಳಿ ನಡಿಗೆ ಮಾರ್ಗ, ಸೈಕಲ್ ಪಥಕ್ಕೆ 600 ಕೋಟಿ
- ವೈಟ್ ಟಾಪಿಂಗ್ಗೆ 800 ಕೋಟಿ.
- ಪರಿಶುದ್ಧ ಗಾಳಿ ಯೋಜನೆಯಡಿ 135 ಕೋಟಿ ಮೊತ್ತದ ಸೈಕಲ್ ಪಥ.
- ಸರ್ ಎಂವಿ ರೈಲ್ವೆ ಟರ್ಮಿನಲ್ ಮೇಲ್ಸೇತುವೆಗೆ 380 ಕೋಟಿ
- 100 ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್ ರಸ್ತೆ
- ಪಾಲಿಕೆ ಆಟದ ಮೈದಾನದ ಕೆಳಗೆ ಪ್ಲೇ ಗ್ರೌಂಡ್ಗೆ.5 ಕೋಟಿ
- ಫ್ಲೈ ಓವರ್, ಅಂಡರ್ ಪಾಸ್ಗೆ 25 ಕೋಟಿ
- ರಸ್ತೆಗಳ ನಿರ್ವಹಣೆಗೆ 40 ಕೋಟಿ
- ಪ್ರತಿ ವಾರ್ಡ್ಗೆ 75 ಲಕ್ಷದಂತೆ 450 ಕೋಟಿ
- ತ್ಯಾಜ್ಯ ವಿಲೇವಾರಿಗೆ 4 ಕಡೆ ಜಮೀನು, 100 ಕೋಟಿ
- ಪೌರ ಕಾರ್ಮಿಕರ ವಿಶ್ರಾಂತಿಗೆ 50 ಕಡೆ ವಿಶ್ರಾಂತಿ ಗೃಹ
- ಘನತ್ಯಾಜ್ಯ ನಿರ್ವಹಣಾ ಸಮಿತಿಗೆ 1000 ಕೋಟಿ
- ತ್ಯಾಜ್ಯ ನಿರ್ವಹಣೆಗೆ 3,673 ಖಾಯಂ, 11,307 ಗುತ್ತಿಗೆ ನೌಕರರ ನೇಮಕ
- 25 ಕಲ್ಯಾಣಿಗಳ ಪುನರುಜ್ಜೀವನಕ್ಕೆ 1 ಕೋಟಿ
- ಆರೋಗ್ಯ ಸೇವೆಗಳ ಉನ್ನತೀಕರಣಕ್ಕೆ 100 ಕೋಟಿ.
- ನಮ್ಮ ಕ್ಲಿನಿಕ್..ಹೆರಿಗೆ ಆಸ್ಪತ್ರೆ ಉನ್ನತೀಕರಣಕ್ಕೆ 20 ಕೋಟಿ
- ಮನೆ ಬಾಗಿಲಿಗೆ ಲಸಿಕೆ ಹಾಕುವ ಆರೋಗ್ಯ ಸಾರಥಿ ಯೋಜನೆ
- ಬಿಬಿಎಂಪಿ ವ್ಯಾಪ್ತಿಯಲ್ಲೂ ಮೆಡಿಕಲ್ ಕಾಲೇಜ್ ಸ್ಥಾಪನೆ.
- 70 ಕೋಟಿ ವೆಚ್ಚದಲ್ಲಿ ಹೊಸ ಇಂದಿರಾ ಕ್ಯಾಂಟೀನ್
- ಶಾಲಾ ಕಾಲೇಜು ಸ್ಥಾಪನೆ,ನಿರ್ವಹಣೆಗೆ 173 ಕೋಟಿ.
- 250 ಮೀಟರ್ ಎತ್ತರದ ಸ್ಕೈ ಡೆಕ್ ಗೆ 350 ಕೋಟಿ.
- ಕೆಂಪೇಗೌಡ ಪ್ರಾಧಿಕಾರದ ಕಾರ್ಯಚಟುವಟಿಕೆಗೆ 50 ಕೋಟಿ.
- ವಿಜಯನಗರ ಕ್ಷೇತ್ರದಲ್ಲಿ ಬೃಹತ್ ಕೆಂಪೇಗೌಡ ಭವನ
- ಪ್ರತಿ ವರ್ಷ ಬೆಂಗಳೂರು ಹಬ್ಬ ಆಚರಣೆ
- ನಿವೃತ್ತ ಪೌರಕಾರ್ಮಿಕರ ಕಲ್ಯಾಣಕ್ಕೆ 137 ಕೋಟಿ
- 250 ವಿದ್ಯುತ್ ಚಾಲಿತ ಆಟೋ ಖರೀದಿಗೆ ಪ್ರೋತ್ಸಾಹ.
- ಒಂಟಿ ಮನೆ ನಿರ್ಮಾಣಕ್ಕೆ 211 ಕೋಟಿ
- ಶ್ರವಣ ವೃದ್ದಾಶ್ರಮ ಯೋಜನೆಗೆ.4 ಕೋಟಿ.
- ತೃತೀಯ ಲಿಂಗಿಗಳಿಗೆ ಹೊಸದಾಗಿ 48 ರಾತ್ರಿ ತಂಗುದಾಣ
- ತೃತೀಯ ಲಿಂಗಿಗಳ ಸಹಾಯಧನ 1.5 ಲಕ್ಷಕ್ಕೆ ಏರಿಕೆ
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿಸಲು ಅಖಾಡಕ್ಕೆ ಧುಮುಕಿದ ಎಸ್.ಆರ್ ವಿಶ್ವನಾಥ್..!
Post Views: 51