ಬೆಂಗಳೂರು : ಟೆಕ್ಕಿಯೊಬ್ಬರ ಖಾಸಗಿ ಫೋಟೋವನ್ನ ಲೀಕ್ ಮಾಡುವ ಬೆದರಿಕೆ ಹಾಕಿ ಸ್ನೇಹಿತರೇ ಬರೋಬ್ಬರಿ 65 ಲಕ್ಷ ರೂ. ಹಣ ವಸೂಲಿ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಶಿವಮೊಗ್ಗ ಮೂಲದ ಯುವಕ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಗಳಾದ ಅಕ್ಷಯ್, ಭರತ್ ಕಳೆದ 18 ವರ್ಷಗಳಿಂದ ಟೆಕ್ಕಿಗೆ ಸ್ನೇಹಿತರಾಗಿದ್ದರು. ಆರೋಪಿಗಳು ನಿನ್ನ ಖಾಸಗಿ ವಿಡಿಯೋ ಮತ್ತು ಫೋಟೋ ವ್ಯಕ್ತಿಯೊಬ್ಬರಿಗೆ ಸಿಕ್ಕಿವೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕದೇ ಇರೋಕೆ ಹನ್ನೆರಡು ಲಕ್ಷ ಹಣ ಕೇಳ್ತಿದ್ದಾನೆ ಅಂದಿದ್ದರು.
ಆ ಮಾತನ್ನು ನಂಬಿದ್ದ ಟೆಕ್ಕಿ ಭಯಗೊಂಡು 12 ಲಕ್ಷ ಹಣ ಕೊಟ್ಟಿದ್ದ. ನಂತರ ಇದೇ ಫೋಟೋ, ವಿಡಿಯೋ ವಿಚಾರ ಸಂಬಂಧ ಪದೇ ಪದೇ 5 ಲಕ್ಷ, 10 ಲಕ್ಷ ಹಣ ಪಡೆಯುತ್ತಿದ್ದರು. ಒಟ್ಟು 65 ಲಕ್ಷ ರೂ. ಪೀಕಿದ್ದಾನೆ. ಟೆಕ್ಕಿ ಮಣಿಕಂಠ ಮನೆಯವರು ಲೋನ್ ಮಾಡಿ ಹಣ ಕಳಿಸಿದ್ದರು.
ಕೊನೆಗೆ ಎಂಜಿನಿಯರಿಂಗ್ ಸ್ನೇಹಿತ ಅಕ್ಷಯ್ ಕುಮಾರ್ ಮೇಲೆ ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ವಿಚಾರಣೆ ನಡೆಸಿದ ವೇಳೆ ಸ್ನೇಹಿತನಾದ ಅಕ್ಷಯ್ ಕುಮಾರ್ ಮತ್ತು ಭರತ್ ಅನ್ನುವವರೇ ಪ್ಲ್ಯಾನ್ ಮಾಡಿ ಮಾಡಿ ಈ ರೀತಿ ಹಣ ವಸೂಲಿ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಸದ್ಯ ಇಬ್ಬರನ್ನ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ : ಫೆಬ್ರವರಿ 10ರಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ – ಮಹತ್ವದ ಸಭೆ..!