ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಟೋಲ್ ಚೆಕ್ ಪೋಸ್ಟ್ ಬಳಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಚಿತ್ರವುಳ್ಳ 96 ವಾಚ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅನಂತಪುರದಿಂದ ಬೆಂಗಳೂರಿಗೆ ಬರ್ತಿದ್ದ AP 31 HE 1111 ನಂಬರ್ನ ಕಾರಿನಲ್ಲಿ 1 ಲಕ್ಷ ಮೌಲ್ಯದ 96 ಕೈ ಗಡಿಯಾರಗಳು ಪತ್ತೆಯಾಗಿವೆ. ವಾಚ್ಗಳ ಜೊತೆ 50 ಲಕ್ಷ ಬೆಲೆಯ ಫಾರ್ಚುನರ್ ಕಾರ್ ಕೂಡ ಸೀಜ್ ಮಾಡಲಾಗಿದೆ. ಯಾವುದೇ ದಾಖಲೆ ಇಲ್ಲದೆ ಕೈ ಗಡಿಯಾರಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಅನಂತಪುರದ ಮೂಲದ ಶ್ರೀ ಬಂಡಿ ನಾಗೇಂದ್ರ ಮೇಲೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಓಮ್ನಿ ವಾಹನದ ನಂಬರ್ ಪ್ಲೇಟ್ ಬದಲಿಸಿ ಸಾಗಿಸಲಾಗುತ್ತಿದ್ದ 20 ಲಕ್ಷ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಪಂಚನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡೂರಿನ ಚೌಡಿಪಾಳ್ಯ ಚೆಕ್ ಪೋಸ್ಟ್ನಲ್ಲಿ ತಪಾಸಣೆ ನಡೆದಿದ್ದು, ಈ ವೇಳೆ ಗನ್ಮ್ಯಾನ್ ಇಲ್ಲದೇ ಹಣ ಸಾಗಣೆ ಮಾಡ್ತಿರೋದಕ್ಕೆ ಮತ್ತು ನಂಬರ್ ಬದಲಾವಣೆ ಮಾಡಿರುವುದಕ್ಕೆ ಅನುಮಾನ ಬಂದು ಸಿಬ್ಬಂದಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಹಣವನ್ನು ಹಿರಿಯೂರಿನ ಡಿ.ಎಂ ಕುರ್ಕೆಗೆ ತೆಗೆದುಕೊಂಡು ಹೋಗಲಾಗತಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಈ ಹಣವನ್ನು ಪಂಚನಹಳ್ಳಿಯ ಕೆನರಾ ಬ್ಯಾಂಕ್ ಗೆ ಸೇರಿದ ಹಣ ತಿಳಿದು ಬಂದಿದೆ.
ಇದನ್ನೂ ಓದಿ : ಟ್ರಾಫಿಕ್ ಕಾನ್ಸ್ಟೇಬಲ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹ*ಲ್ಲೆ ನಡೆಸಿದ ಬೈಕ್ ಸವಾರ : FIR ದಾಖಲು..!