Download Our App

Follow us

Home » ರಾಜಕೀಯ » ಮೈಸೂರಲ್ಲಿ ವಿನೂತನ ಮತದಾನ ಜಾಗೃತಿ : ಮತದಾನ ಮಾಡಿದರೆ ಒಂದು ಕೆಜಿ ಗೋಧಿ ಹಿಟ್ಟು ಫ್ರೀ..!

ಮೈಸೂರಲ್ಲಿ ವಿನೂತನ ಮತದಾನ ಜಾಗೃತಿ : ಮತದಾನ ಮಾಡಿದರೆ ಒಂದು ಕೆಜಿ ಗೋಧಿ ಹಿಟ್ಟು ಫ್ರೀ..!

ಮೈಸೂರು : ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ನಾಳೆ ಅಂದರೆ ಏಪ್ರಿಲ್ 26ರಂದು ನಡೆಯಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಮೈಸೂರಲ್ಲಿ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

ನಾಳೆ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿರುವ ಮತದಾನ ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದೆ. ಮತದಾನ ಮಾಡಿ ಬಂದರೆ ಒಂದು ಕೆಜಿ ಗೋಧಿ ಹಿಟ್ಟು ಫ್ರೀಯಾಗಿ ನೀಡೋದಾಗಿ ಬಿ ಶಿಪ್ ಹಾಗೂ ವಾಸವಿ ಯುವಜನ ಸಂಘ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

 

ನಗರದ ದೇವರಾಜ‌ ಮಾರುಕಟ್ಟೆ ಬಳಿಯ ಚಿಕ್ಕ ಗಡಿಯಾರ ವೃತ್ತದ ಬಳಿ ಮಳಿಗೆ ಆರಂಭಿಸಲಾಗಿದ್ದು, ನಾಳೆ ಮತದಾನ ಮಾಡಿ ಶಾಯಿ ಹಾಕಿಸಿಕೊಂಡಿದ್ದನ್ನು ತೋರಿಸಿದರೆ ಉಚಿತವಾಗಿ ಒಂದು ಕೆಜಿ ಗೋಧಿ ಹಿಟ್ಟು ವಿತರಣೆ ಮಾಡಲಾಗುತ್ತೆ.  ಮತದಾನ ಮಾಡದೇ ಎಲ್ಲಿಯೂ ಹೋಗದಿರಿ ಎಂಬ ಸಂದೇಶದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಇದನ್ನೂ ಓದಿ : ಪ್ರಧಾನಿ ಮೋದಿಗೆ ಸೋಲಿನ ಹತಾಷೆ ಕಾಡ್ತಿದೆ : ಡಿಕೆ ಶಿವಕುಮಾರ್ ಟಾಂಗ್..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here