ವಿಜಯನಗರ : ಹೊಸಪೇಟೆ ತಾಲೂಕಿನಲ್ಲಿ ಕಲುಷಿತ ನೀರು ಸರಬರಾಜು ಪ್ರಕರಣ ನಡೆದಿದೆ. ಈ ಕಲುಷಿತ ನೀರು ಸೇವನೆಯಿಂದಾಗಿ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಕಲುಷಿತ ನೀರು ಸೇವಿಸಿ ಕಾರಿಗನೂರು RBSSN ಕ್ಯಾಂಪ್ನ ನಿವಾಸಿಯೊಬ್ಬರು ಮೃತ ಪಟ್ಟಿದ್ದಾರೆ. 60 ವರ್ಷದ ಸೀತಮ್ಮ ಮೃತ ದುರ್ದೈವಿಯಾಗಿದ್ದಾರೆ.
ವಾಂತಿ, ಭೇದಿಯಿಂದಾಗಿ ಮಹಿಳೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೇಸ್ ಸಿರಿಯಸ್ ಇದ್ದಿದ್ರಿಂದ ಸೀತಮ್ಮ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೀತಮ್ಮ ಕೊನೆಯುಸಿರೆಳೆದಿದ್ದಾರೆ.
ಕುಡಿಯೋ ನೀರಲ್ಲಿ ಪಾಚಿ ಮಿಶ್ರಿತ ನೀರು ಗ್ರಾಮಕ್ಕೆ ಸರಬರಾಜು ಆಗಿತ್ತು. ಏರ್ ಟ್ಯಾಂಕ್ ಟ್ಯಾಪ್ ಕ್ಲೀನ್ ಮಾಡದೆ ಇರೋದರಿಂದಲೇ ಗ್ರಾಮಕ್ಕೆ ಕಲುಷಿತ ನೀರು ಸಪ್ಲೈ ಆಗಿದೆ. ಇದೇ ನೀರು ನಾಲ್ಕು ದಿನದ ಹಿಂದೆ ಇಡೀ ಗ್ರಾಮಕ್ಕೆ ಸಪ್ಲೈ ಆಗಿತ್ತು.
ಕಲುಷಿತ ನೀರು ಸೇವಿಸಿ 30 ಕ್ಕೂ ಅಧಿಕ ಜನ ವಾಂತಿ, ಭೇದಿಗೆ ಒಳಗಾಗಿದ್ದರು. ಇಂದು ಮಧ್ಯಾಹ್ನ ಶಾಸಕ ಗವಿಯಪ್ಪ, ಡಿಸಿ ದಿವಾಕರ್ ಭೇಟಿ ನೀಡಿದ್ದರು. ಈ ಪ್ರಕರಣ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಯುವಕನ ಕತ್ತುಕೊಯ್ದು ಬರ್ಬರ ಹ*ತ್ಯೆ..!