ಉಡುಪಿ : ಇಂದು ಕರುನಾಡಿನಲ್ಲಿ ಲೋಕಸಭಾ ಚುನಾವಣೆಯ ಮತಹಬ್ಬ ನಡೆಯುತ್ತಿದೆ. ದೇಶದಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದರೆ, ಕರುನಾಡ ಪಾಲಿಗೆ ಇದು ಮೊದಲ ಹಂತದ ಮತದಾನವಾಗಿದೆ.
ಉಡುಪಿಯಲ್ಲಿ ಅಷ್ಟ ಮಠಾಧೀಶರಿಂದ ಮತದಾನ : ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹಾಗೂ ಪಲಿಮಾರು ಮಠದ ಕಿರಿಯ ಶ್ರೀಗಳು ಮತ ಚಲಾಯಿಸಿದ್ದಾರೆ. ಮತಗಟ್ಟೆ ಸಂಖ್ಯೆ 185ರಲ್ಲಿ ಸ್ವಾಮೀಜಿಗಳು ಮತದಾನ ಮಾಡಿದ್ದಾರೆ.
ತುಮಕೂರಿನಲ್ಲಿ ಸಿದ್ದಗಂಗಾ ಸ್ವಾಮೀಜಿ ಅವರು ಸಿದ್ದಗಂಗಾ ಮಠದಲ್ಲಿರುವ ಬೂತ್ನಲ್ಲಿ ಮತ ಚಲಾಯಿಸಿದ್ದಾರೆ. ಪ್ರತಿ ವರ್ಷವೂ ಮೊದಲು ಮತದಾನ ಮಾಡುವ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಹಸುವಿಗೆ ಹಣ್ಣು ತಿನ್ನಿಸಿ ಮತದಾನಕ್ಕೆ ಹಾಜರದರು. ಮತಗಟ್ಟೆ ಸಂಖ್ಯೆ 113ರಲ್ಲಿ ಮೊದಲ ಮತ ಹಾಕಿದರು.
ಮತದಾನ ಮಾಡಿದ ಬಳಿಕ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಅವರು, ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಪ್ರಜಾಪ್ರಭುತ್ವದಲ್ಲಿ ನಮಗೆ ಸಿಕ್ಕಿರುವ ಹಕ್ಕು. ಯಾರೂ ತಮ್ಮ ಹಕ್ಕನ್ನು ವ್ಯರ್ಥ ಮಾಡಬೇಡಿ ಎಂದು ಶ್ರೀಗಳು ಮನವಿ ಮಾಡಿದರು.
ಇದನ್ನೂ ಓದಿ : ಜಯನಗರದಲ್ಲಿ ನಾರಾಯಣ ಮೂರ್ತಿ ದಂಪತಿ ಮತದಾನ : ತಪ್ಪದೇ ವೋಟ್ ಮಾಡಲು ಮನವಿ ಮಾಡಿದ ರಾಹುಲ್ ದ್ರಾವಿಡ್..!