Download Our App

Follow us

Home » ಮೆಟ್ರೋ » ಈದ್​​ಮಿಲಾದ್​ಗೆ ಟೈಟ್ ಸೆಕ್ಯೂರಿಟಿ : ಡಿಜೆ ಬಳಸುವಂತಿಲ್ಲ, ಹರಿತವಾದ ಆಯುಧ ಇಟ್ಟುಕೊಳ್ಳುವಂತಿಲ್ಲ – ಕಮಿಷನರ್​​ ಖಡಕ್​​​​ ಸೂಚನೆ..!

ಈದ್​​ಮಿಲಾದ್​ಗೆ ಟೈಟ್ ಸೆಕ್ಯೂರಿಟಿ : ಡಿಜೆ ಬಳಸುವಂತಿಲ್ಲ, ಹರಿತವಾದ ಆಯುಧ ಇಟ್ಟುಕೊಳ್ಳುವಂತಿಲ್ಲ – ಕಮಿಷನರ್​​ ಖಡಕ್​​​​ ಸೂಚನೆ..!

ಬೆಂಗಳೂರು : ನಾಗಮಂಗಲ ಗಲಭೆ ಬೆನ್ನಲ್ಲೇ ಪೊಲೀಸರು ಅಲರ್ಟ್​ ಆಗಿದ್ದಾರೆ. ಸೋಮವಾರ ಬೆಂಗಳೂರು ನಗರದಲ್ಲಿ ಈದ್​ಮಿಲಾದ್​ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಪಾಲಿಸಬೇಕಾದ ಕೆಲ ಸೂಚನೆಗಳನ್ನು ಪೊಲೀಸರು ಹೊರಡಿಸಿದ್ದಾರೆ.

ಈಗಾಗಲೇ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಸಭೆ ನಡೆಸಿದ್ದಾರೆ. ಇದರೊಂದಿಗೆ ಹಬ್ಬದ ಮೆರವಣಿಗೆಯಲ್ಲಿ ಎಲ್ಲೂ ಡಿಜೆ ಸೌಂಡ್ ಹಾಕದಂತೆ ಹಾಗೂ ಈದ್ ಮಿಲಾದ್​ ಮೆರವಣಿಗೆಯಲ್ಲಿ ಹರಿತವಾದ ಆಯುಧ ತರುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್​​ ಬಿ. ದಯಾನಂದ್​ ಖಡಕ್​​​​ ಸೂಚನೆ ನೀಡಿದ್ದಾರೆ.

ಇನ್ನು ಈದ್‌ಮಿಲಾದ್ ಹಬ್ಬದ ದಿನದಂದು   ನಗರದಲ್ಲಿ ಮುಸ್ಲಿಮರು ಮೆರವಣಿಗೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಜೆಸಿನಗರ, ಶಿವಾಜಿನಗರ, ಯಲಹಂಕ ಓಲ್ಡ್ ಟೌನ್​​, ಬೆಳ್ಳಳ್ಳಿ ಕ್ರಾಸ್ ,ರಾಜಗೋಪಾಲನಗರ, ಪೀಣ್ಯ, ಸೌತ್ ಎಂಡ್ ಸರ್ಕಲ್, ಆರ್.ವಿ ರಸ್ತೆ, ಲಾಲ್​ಬಾಗ್​​​ ವೆಸ್ಟ್ ಗೇಟ್, ಗೀತಾ ಜಂಕ್ಷನ್​, ಬೇಂದ್ರೆ ಜಂಕ್ಷನ್​, ಓಬಳಪ್ಪ ಗಾರ್ಡನ್ ಜಂಕ್ಷನ್, ಮಹಾಲಿಂಗೇಶ್ವರ ಲೇಔಟ್, ಆಡುಗೋಡಿ ಮೆರವಣಿಗೆಗೆ ಟೈಟ್ ಸೆಕ್ಯೂರಿಟಿ ಹಾಗೂ ಈ ಮಾರ್ಗಗಳಲ್ಲಿ ಸಂಚಾರ ಬದಲಾವಣೆ, ಭದ್ರತೆ ಹೆಚ್ಚಳಕ್ಕೆ ಕಮಿಷನರ್​ ಬಿ.ದಯಾನಂದ್​ ಸೂಚನೆ ನೀಡಿದ್ದಾರೆ.

ಸೂಚನೆಗಳು : 

  • ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೆ ಹರಿತವಾದ ವಸ್ತುಗಳನ್ನು ಹೊಂದಿರಬಾರದು.
  • ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಬಾರದು.
  • ಸ್ತಬ್ದ ಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನು ಒಳಗೊಂಡಿರಬಾರದು.
  • ಯಾವುದೇ ಪೂಜಾ ಸ್ಥಳಗಳ (ದೇವಸ್ಥಾನ/ಚರ್ಚಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು.
  • ಮೆರವಣಿಗೆಯ ವೇಳೆ ಆಯೋಜಕರು ವಿದ್ಯುತ್ (ಕೆ.ಇ.ಬಿ) ಇಲಾಖೆಯಿಂದ ಸಿಬ್ಬಂದಿಯವರನ್ನು ನೇಮಿಸಿಕೊಂಡು ಯಾವುದೇ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
  • ಮೆರವಣಿಗೆಯ ಸಂದರ್ಭದಲ್ಲಿ ಆಯೋಜಕರು ಬೆಂಕಿನಿಂದಿಸುವ ಸಾಮಗ್ರಿಯನ್ನು ಇಟ್ಟುಕೊಳ್ಳಬೇಕು.
  • ರಾತ್ರಿ ಮೆರವಣಿಗೆ ಮುಗಿದ ನಂತರ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚಾಗಿ ದ್ವಿ-ಚಕ್ರ ವಾಹನವನ್ನು ಚಲಿಸಬಾರದು.
  • ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಮೈಕ್​​​​ ಬಳಕೆಗೆ ಅವಕಾಶ
  • ಧ್ವನಿವರ್ಧಕಗಳನ್ನು ಬಳಸಲು ಸ್ಥಳೀಯ ಪೊಲೀಸರ ಅನುಮತಿ/ಪರವಾನಗೆ ಪಡೆದುಕೊಳ್ಳಬೇಕು

ಇದನ್ನೂ ಓದಿ : ಬೆಂಗಳೂರಿನ ಟೌನ್​​ ಹಾಲ್​ ಮುಂಭಾಗ ಹೈಡ್ರಾಮಾ – ಗಣೇಶ ಮೂರ್ತಿ ಸಮೇತ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ..! 

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here