ಬೆಂಗಳೂರು : ಬೆಂಗಳೂರಿನ ಕುಮಾರ ಸ್ವಾಮಿ ಲೇಔಟ್ ಪೊಲೀಸರು ಕುಖ್ಯಾತ ಲ್ಯಾಪ್ಟಾಪ್ ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ. ದಯಾನಂದ್ ಸಾಗರ್ ಕಾಲೇಜು ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳವು ಬಗ್ಗೆ ದೂರು ಬಂದಿತ್ತು. ಇದನ್ನು ಆಧರಿಸಿ ತನಿಖೆ ಮಾಡಿದ ಪೊಲೀಸರು ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕುಮಾರ್ ಪಿಜಿ ಹಾಗೂ ವಿದ್ಯಾರ್ಥಿಗಳು ವಾಸವಿರುವ ರೂಂಗಳನ್ನು ಟಾರ್ಗೆಟ್ ಮಾಡಿ ಕಳವು ಮಾಡ್ತಾ ಇದ್ದ. ಕದ್ದ ಲ್ಯಾಪ್ ಟಾಪ್ಗಳನ್ನ ತಮಿಳುನಾಡಿನ ಶಂಕರಪುರ ಏರಿಯಾದಲ್ಲಿ ಮಾರಾಟ ಮಾಡಿ, ಕಾಲೇಜು ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ಕಡಿಮೆ ಬೆಲೆಗೆ ಲ್ಯಾಪ್ಟಾಪ್ ಮಾರಿ ಹೋಗಿದ್ದಾರೆ ಎಂದು ನಂಬಿಸುತ್ತಿದ್ದ.
ಇನ್ನು ಕಾಲೇಜು ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳವು ಬಗ್ಗೆ ದೂರು ಬಂದಿತ್ತು. ಇದನ್ನು ಆಧರಿಸಿ ತನಿಖೆ ಮಾಡಿದ ಪೊಲೀಸರು ಕುಮಾರ್ನನ್ನು ಬಂಧಿಸಿದ್ದಾರೆ. ಬಂಧಿತನಿಂದ 25 ಲ್ಯಾಪ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕುಮಾರ ಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ವಿಡಿಯೋ ಮಾಡಿದ್ದ ಹೇಮಾ – ಚಾಲಾಕಿ ನಟಿಯ ಕಳ್ಳಾಟ ಕೊನೆಗೂ ಬಯಲು..!