ದಾವಣಗೆರೆ : ಮಾಸಾಸನ ಹಣಕ್ಕಾಗಿ ವೃದ್ಧೆಯೊಬ್ಬರು 4 ಕಿಲೋ ಮೀಟರ್ ತೆವಳಿಕೊಂಡು ಬಂದಿರುವ ಅಮಾನವೀಯ ಘಟನೆ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದಲ್ಲಿ ನಡೆದಿದೆ.
ಎರಡು ತಿಂಗಳಿನಿಂದ ಮಾಸಾಸನ ಹಣ ಬಾರದಿದ್ದಕ್ಕೆ ಅಜ್ಜಿ ನಂದಿತಾವರೆಯಿಂದ ಕುಣಿಬೆಳಕೆರೆ ಪೋಸ್ಟ್ ಆಫೀಸ್ ತೆವಳಿಕೊಂಡೇ ಬಂದಿದ್ದಾರೆ.
ಕಾಲಿಲ್ಲದ ಅಜ್ಜಿ ಗಿರಿಜಮ್ಮ ಅವರು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದ ನಿವಾಸಿಯಾಗಿದ್ದಾರೆ. ಮಾಸಾಸನ ಪಡೆಯಲು ತೆವಳಿಕೊಂಡು ಬಂದಿದ್ದರಿಂದ ಅಜ್ಜಿಗೆ ಕಾಲಲ್ಲಿ ಬೊಬ್ಬೆಗಳೆದ್ದಿದೆ.
ಹಾಗಾಗಿ ವೃದ್ಧೆ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ತಡವಾಗಿ ಎಚ್ಚೆತ್ತ ಗ್ರಾಮ ಪಂಚಾಯತ್ ಅಧಿಕಾರಿಗಳು ಆ ಹಿರಿಯ ಜೀವವನ್ನು ಹರಿಹರ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.
ಇದನ್ನೂ ಓದಿ : ಕೋಲಾರದಲ್ಲಿ ಬಸ್ ಹರಿದು ಮಹಿಳೆ ಸಾ*ವು, ಓರ್ವ ಗಂಭೀರ..!
Post Views: 119