ಹೊಸ ಹೊಸ ಬಗೆಯ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ಸ್ಟಾರ್ ಸುವರ್ಣ ವಾಹಿನಿ ಸದಾ ಮುಂದಿರುತ್ತೆ. ಇದೀಗ ದಸರಾ ಹಬ್ಬದ ವಿಶೇಷವಾಗಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆಯನ್ನು ನೀಡುವ ಉದ್ದೇಶದಿಂದ ಸ್ಟಾರ್ ಸುವರ್ಣ ವಾಹಿನಿಯು ಕಿರುತೆರೆಯ ಅತೀ ದೊಡ್ಡ ದಸರಾ ಸಂಭ್ರಮವನ್ನೊಳಗೊಂಡ “ಸುವರ್ಣ ದಸರಾ ದರ್ಬಾರ್” ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸಜ್ಜಾಗಿದೆ.
ನಾಡಹಬ್ಬದ ಪ್ರಯುಕ್ತ ‘ಸುವರ್ಣ ದಸರಾ ದರ್ಬಾರ್’ ವೇದಿಕೆಯಲ್ಲಿ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಪುರಸ್ಕಾರಗಳನ್ನು ಮಾಡಲಾಗಿದೆ. ನವಶಕ್ತಿಯರ ಮಹತ್ವವನ್ನು ಸಾರುವ ಈ ನವರಾತ್ರಿಯಂದು ಇದೇ ಮೊದಲ ಬಾರಿಗೆ ತಾಯಂದಿರ ಮಹತ್ವವನ್ನು ಸಾರಲು ಕಿರುತೆರೆ ಕಲಾವಿದರು ತಮ್ಮ ತಾಯಂದಿರೊಂದಿಗೆ ವೇದಿಕೆಯಲ್ಲಿ ಭಾಗಿಯಾಗಿದ್ದು, ತಾಯಂದಿರ ಬಗ್ಗೆ ಹಿತನುಡಿಗಳನ್ನಾಡಿ, ತಾಯಂದಿರ ಪಾದ ಪೂಜೆಯನ್ನು ಮಾಡಿ ಉಡುಗೊರೆಯನ್ನು ನೀಡಿದ್ದಾರೆ. ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಅಂದ್ರೆ ನಟ ರೋರಿಂಗ್ ಸ್ಟಾರ್ ಶ್ರೀ ಮುರಳಿಯವರು ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದು ಕೊಟ್ಟಿದ್ದಾರೆ. ಜೊತೆಗೆ ತಾಯಿಯ ಬಗ್ಗೆ ಮಾತನಾಡಿ ಭಾವುಕರಾಗಿದ್ದರು.
‘ನೀನಾದೆನಾ’ ಖ್ಯಾತಿಯ ವಿಕ್ರಂ-ವೇದಾ, ನಟಿ ತನಿಷಾ, ವರ್ತೂರ್ ಸಂತೋಷ್, ಕಿರಿಕ್ ಕೀರ್ತಿ, ರೆಮೋ, ಸ್ನೇಹಿತ್, ಅನನ್ಯ, ನಟಿ ಪ್ರಿಯಾಂಕ, ಗಾಯಕ ಚಿನ್ಮಯ್ ಆತ್ರೇಯಸ್ ಎಲ್ಲರೂ ಒಂದಾಗಿ ವೇದಿಕೆಯಲ್ಲಿ ಭರ್ಜರಿ ಮನರಂಜನೆಯ ಮಹಾ ಮಳೆಯನ್ನೇ ಸುರಿಸಿದ್ದಾರೆ. ನಟಿ ಮಾನ್ವಿತಾ ಹರೀಶ್ ಹಾಗು ರಕ್ಷಕ್ ಬುಲೆಟ್ ಅದ್ಬುತ ಡಾನ್ಸ್ ಪರ್ಫಾರ್ಮೆನ್ಸ್ ನೀಡಿದ್ದು, ಕಾರ್ತಿಕ್ ಹಾಗು ನಮ್ರತಾ ಜೋಡಿಯಾಗಿ ಮಾಡಿರೋ ರೇನ್ ಡಾನ್ಸ್ಗೆ ವೀಕ್ಷಕರು ಮನಸೋಲೋದಂತೂ ಖಚಿತ.
‘ಸುವರ್ಣ ಸೂಪರ್ ಸ್ಟಾರ್’ ಖ್ಯಾತಿಯ ನಟಿ, ನಿರೂಪಕಿ ಶಾಲಿನಿಯವರು ‘ದಸರಾ ದರ್ಬಾರ್’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಜೊತೆಗೆ ಭರ್ಜರಿ ಡಾನ್ಸ್, ಹಾಡು ಹರಟೆ, ಆಟ ತುಂಟಾಟಗಳಿಂದ ವೀಕ್ಷಕರಿಗೆ ಮನರಂಜನೆಯ ನೀಡಿದ್ದಾರೆ. ‘ಸುವರ್ಣ ದಸರಾ ದರ್ಬಾರ್’ ಇದೇ ಭಾನುವಾರ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ : ‘ಮಾರ್ಟಿನ್’ ಅದ್ದೂರಿ ಮೇಕಿಂಗ್ – ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಬ್ಬರಕ್ಕೆ ಕೌಂಟ್ಡೌನ್ ಸ್ಟಾರ್ಟ್..!