ಬೆಂಗಳೂರು : ರಾಜ್ಯ ಸರ್ಕಾರ ಈಗಲಾದ್ರೂ ಓಲೈಕೆ ರಾಜಕಾರಣ ನಿಲ್ಲಿಸಲಿ, ದೇಶದ್ರೋಹಿ ಹೇಳಿಕೆ ಕೊಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಕಲಬುರಗಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕರ್ನಾಟಕ ಒಂದು ರೀತಿ ಅಶಾಂತಿ ತೋಟ ಆಗ್ತಿದೆ, ಅಶಾಂತಿ ತೋಟದಲ್ಲಿ ದೇಶ ವಿರೋಧಿ, ರಕ್ತದ ಕಲೆಗಳು ಕಾಣ್ತಿವೆ. ಹಿಂದು ಕಾರ್ಯಕರ್ತರ ಕಗ್ಗೊಲೆಗಳು ನಿರಂತರವಾಗಿ ನಡೆಯುತ್ತಿವೆ, ಕಳೆದ 9 ತಿಂಗಳಲ್ಲಿ 15ಕ್ಕೂ ಹೆಚ್ಚು ಕೊಲೆಗಳು ಆಗಿವೆ ಎಂದಿದ್ದಾರೆ.
ಪಾಕಿಸ್ತಾನ್ ಜೊತೆ ನಂಟು ಇರುವವರು ಬಾಲ ಬಿಚ್ಚುತ್ತಿದ್ದಾರೆ, ಕರ್ನಾಟಕವನ್ನು ಉಗ್ರರ ಸ್ಲೀಪರ್ ಸೆಲ್ ಮಾಡುವ ಪ್ರಯತ್ನ ಆಗ್ತಿದೆ. ಘೋಷಣೆ ಕೂಗಿದವರನ್ನು ಅರೆಸ್ಟ್ ಮಾಡಿದ್ರೆ ಸಾಲದು, ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಮೇಲೂ ಕ್ರಮ ಆಗಲಿ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಶಂಕಿತ ಉಗ್ರರ ಬಂಧನ ಪ್ರಕರಣ : ಬೆಂಗಳೂರು ಸೇರಿ ಏಳು ರಾಜ್ಯಗಳಲ್ಲಿ NIA ದಾಳಿ..!
Post Views: 111