Download Our App

Follow us

Home » ಅಪರಾಧ » ಶಂಕಿತ ಉಗ್ರರ ಬಂಧನ ಪ್ರಕರಣ : ಬೆಂಗಳೂರು ಸೇರಿ ಏಳು ರಾಜ್ಯಗಳಲ್ಲಿ NIA ದಾಳಿ​..!

ಶಂಕಿತ ಉಗ್ರರ ಬಂಧನ ಪ್ರಕರಣ : ಬೆಂಗಳೂರು ಸೇರಿ ಏಳು ರಾಜ್ಯಗಳಲ್ಲಿ NIA ದಾಳಿ​..!

ಬೆಂಗಳೂರು : ಕೆಫೆ ಬ್ಲಾಸ್ಟ್​ ಹೊತ್ತಲ್ಲೇ NIAಯಿಂದ ಬಿಗ್​ ರೇಡ್​ ನಡೆದಿದೆ. ಬೆಂಗಳೂರಿನ R.T ನಗರದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ಬೆಂಗಳೂರು ಸೇರಿ ಏಳು ರಾಜ್ಯಗಳಲ್ಲಿ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಜೈಲಿನಲ್ಲಿ ಸಹ ಕೈದಿಗಳನ್ನು ಸೆಳೆದು ಉಗ್ರ ಕೃತ್ಯಕ್ಕೆ ಪ್ರಚೋದಿಸಿದ್ದ ಆರೋಪ ಕೇಳಿಬಂದಿತ್ತು. ಸುಲ್ತಾನ್​​ಪಾಳ್ಯದಲ್ಲಿ ಲೈವ್ ಗ್ರನೇಡ್ , ಪಿಸ್ತೂಲ್ ಮತ್ತಿತರೆ ವಸ್ತು ಪತ್ತೆಯಾಗಿದ್ದವು, ಹಾಗಾಗಿ ಮುಂದಿನ ತನಿಖೆಗಾಗಿ ಕೇಂದ್ರ ಗೃಹ ಇಲಾಖೆ NIAಗೆ ಕೇಸ್​ ವಹಿಸಿತ್ತು. 2023ರ ಜುಲೈನಲ್ಲಿ ಆರ್ ಟಿ ನಗರ, ಹೆಬ್ಬಾಳ, ಸುಲ್ತಾನ್ ಪಾಳ್ಯದಲ್ಲಿ ರೇಡ್​ ನಡೆದಿತ್ತು.

ಸರಣಿ ವಿಧ್ವಂಸಕ ಕೃತ್ಯ ನಡೆಸಿ, ಅನಾಹುತ ಎಸಗಲು ಐವರು ಸಂಚು ರೂಪಿಸಿದ್ದರು. ಹಾಗಾಗಿ ಸೈಯದ್ ಸುಹೇಲ್‌ ಖಾನ್‌, ಜಾಹೀದ್‌ ತಬ್ರೇಸ್‌, ಸೈಯದ್‌ ಮುದಾಸೀರ್‌ ಪಾಷಾ, ಮಹಮದ್‌ ಫೈಸಲ್‌, ಮಹಮದ್‌ ಉಮರ್‌ ಎಂಬ ಶಂಕಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ದೇಶದ್ರೋಹ ಚಟುವಟಿಕೆ, ಒಳಸಂಚು, ಶಸ್ತ್ರಾಸ್ರ ಕಾಯ್ದೆಯಡಿ ಹೆಬ್ಬಾಳದಲ್ಲಿ ಕೇಸ್​ ದಾಖಲಾಗಿದೆ.

2008ರ ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ ಟಿ.ನಜೀರ್‌ ಅದೇ ಜೈಲಿನಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್-ಎ-ತೊಯ್ಬಾದ ನಜೀರ್‌ ಜೊತೆ ಜುನೈದ್‌ಗೆ ಸಂಪರ್ಕ ಬೆಳೆದಿದೆ.

ಇದನ್ನೂ ಓದಿ : ‘ರೋಜಿ’ ಸಿನಿಮಾದಲ್ಲಿ ಒರಟ ಪ್ರಶಾಂತ್..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here