ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹಾಗೂ ಕಾರ್ತಿಕ್ಗೆ SIT ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ. ಎಸ್ಐಟಿ ನೀಡಿರುವ ನೋಟಿಸ್ನಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಇತ್ತೀಚೆಗೆ ದೇವರಾಜೇಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ದಾಖಲೆ ಬಿಡುಗಡೆ ಮಾಡುವುದರ ಜೊತೆಗೆ ಒಂದಷ್ಟು ಗಂಭೀರ ಆರೋಪಗಳನ್ನೂ ಮಾಡಿದ್ದರು. ಈ ಹಿನ್ನಲೆಯಲ್ಲಿ ಅವರ ಬಳಿ ಇರೋ ಎವಿಡೆನ್ಸ್, ಫೋಟೋಸ್, ಆಡಿಯೋ ತರಲು ಸೂಚನೆ ನೀಡಿದೆ.
ಇನ್ನು ದೇವರಾಜೇಗೌಡ ಪ್ರೆಸ್ ಮೀಟ್ ನಡೆಸಿ ಕಾರ್ತಿಕ್ ಬಗ್ಗೆ ಸಾಕ್ಷಿ ನೀಡಿದ್ದಾಗಿ ಹೇಳಿದ್ದಾರೆ. ಈ ಸಂಬಂಧವೂ ಹೆಚ್ಚಿನ ವಿಚಾರಣೆ ನಡೆಸಲಿರೋ ಎಸ್ಐಟಿ ಇಬ್ಬರನ್ನೂ ಮತ್ತೊಂದು ರೌಂಡ್ ವಿಚಾರಣೆ ಮಾಡುವ ಉದ್ದೇಶದಿಂದ ನೋಟಿಸ್ ನೀಡಿದೆ.
ಇದನ್ನೂ ಓದಿ : ಜೈಲು ಸೇರಿರೋ ರೇವಣ್ಣಗೆ ಇಂದು ರಿಲೀಫ್ ಸಿಗುತ್ತಾ..?
Post Views: 37