Download Our App

Follow us

Home » ಅಪರಾಧ » ಕೆಂಗೇರಿ ಒಂಟಿ ಮಹಿಳೆ ಹ*ತ್ಯೆ ಪ್ರಕರಣ :​​​ ಆರೋಪಿ ಅರೆಸ್ಟ್​..!

ಕೆಂಗೇರಿ ಒಂಟಿ ಮಹಿಳೆ ಹ*ತ್ಯೆ ಪ್ರಕರಣ :​​​ ಆರೋಪಿ ಅರೆಸ್ಟ್​..!

ಬೆಂಗಳೂರು : ಕೆಂಗೇರಿ ಒಂಟಿ ಮಹಿಳೆ ಮರ್ಡರ್​​​ ಆರೋಪಿಯನ್ನು ಪೊಲೀಸರು ಅರೆಸ್ಟ್ ​ಮಾಡಿದ್ದಾರೆ. ಮೇ.10ರಂದು ಕೋನಸಂದ್ರದಲ್ಲಿ 24 ವರ್ಷದ ಮೋನಿಕಾ ಸಾಲ ತೀರಿಸಲು ಮನೆ ಒಡತಿಯನ್ನೇ ಹತ್ಯೆ ಮಾಡಿದ್ದಳು.

ಮೋನಿಕಾ ಮೂಲತಃ ಕೋಲಾರದವಳಾಗಿದ್ದು, ಗುರುಮೂರ್ತಿ ಮನೆಯಲ್ಲಿ 3 ತಿಂಗಳ ಹಿಂದೆ ಬಾಡಿಗೆಗೆ ಬಂದಿದ್ದಳು. ಸಾಲ ತೀರಿಸಲು, ಶೋಕಿ ಜೀವನ ನಡೆಸಲು ಯುವತಿ ಈ ಕೃತ್ಯವೆಸಗಿದ್ದು, ಮೋನಿಕಾ ಕಂಪೆನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡ್ತಿದ್ದಳು. ಪ್ರಿಯಕರನನ್ನೇ ಗಂಡ ಎಂದು ತೋರಿಸಿ ಮೋನಿಕಾ ಬಾಡಿಗೆ ಮನೆ ಪಡೆದಿದ್ದು, ಶೋಕಿಗಾಗಿ ವಿಪರೀತ ಕೈಸಾಲ ಮಾಡಿಕೊಂಡಿದ್ದಳು. ಪ್ರಿಯಕರನಿಗೆ ಟಾಟಾ ಏಸ್ ವಾಹನ ಖರೀದಿಸಲು ಹಣ ಬೇಕಾಗಿತ್ತು. ಈ ವೇಳೆ ಮನೆ ಒಡತಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಮೋನಿಕಾಳ ಕಣ್ಣು ಬಿದ್ದಿತ್ತು.

ದಿವ್ಯ ಪತಿ ಗುರುಮೂರ್ತಿ ಕೆಂಗೇರಿ ಉಪನಗರದಲ್ಲಿ ಸಲೂನ್ ನಡೆಸುತ್ತಿದ್ದರು. ದಿವ್ಯಾ ಅತ್ತೆ-ಮಾವ ಸಹ ಬೆಳಗಾದ್ರೆ ಕೆಲಸಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ದಿವ್ಯಾ ಹಾಗೂ 2 ವರ್ಷದ ಮಗು ಮಾತ್ರ ಇರುತ್ತಿದ್ದರು. ಯುವತಿ ಸಮಯ ಹೊಂಚು ಹಾಕಿ ಕುತ್ತಿಗೆ ಹಿಸುಕಿ 36 ಗ್ರಾಂ ಸರ ಕದ್ದಿದ್ದಳು. ತನಿಖೆ ವೇಳೆ ಮೋನಿಕಾ ಪಾತ್ರ ಪತ್ತೆ ಮಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : 25 ದಿನ ಪೂರೈಸಿದ “ಸಾಮ್ರಾಟ್ ಮಾಂಧಾತ” ಚಿತ್ರ..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here