Download Our App

Follow us

Home » ರಾಜಕೀಯ » ಸಿದ್ದರಾಮಯ್ಯನವರಿಗೆ ಲೋಕಸಭೆ ಎಲೆಕ್ಷನ್​ ಬಂದ್ಮೇಲೆ ಒಕ್ಕಲಿಗರ ಬಗ್ಗೆ ಪ್ರೀತಿ ಬಂದಿದೆ : ಹೆಚ್​ಡಿಕೆ ಕಿಡಿ..!

ಸಿದ್ದರಾಮಯ್ಯನವರಿಗೆ ಲೋಕಸಭೆ ಎಲೆಕ್ಷನ್​ ಬಂದ್ಮೇಲೆ ಒಕ್ಕಲಿಗರ ಬಗ್ಗೆ ಪ್ರೀತಿ ಬಂದಿದೆ : ಹೆಚ್​ಡಿಕೆ ಕಿಡಿ..!

ಲೋಕಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಅಖಾಡವನ್ನು ಸಿದ್ದಗೊಳಿಸುತ್ತಿದೆ. ಇದರೊಂದಿಗೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಗೆಲ್ಲುವ ಕಾರ್ಯತಂತ್ರ ರೂಪಿಸುತ್ತಿರುವ ಮೈತ್ರಿ ನಾಯಕರು ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನಿರ್ಮಲಾನಂದನಾಥ ಶ್ರೀಗಳಿಂದ ಆಶೀರ್ವಾದ ಪಡೆಯುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಒಕ್ಕಲಿಗ ಸಮಾಜಕ್ಕೆ ಏನು ಮಾಡಿದ್ದಾರೆ? ಜೆಡಿಎಸ್​ನಲ್ಲಿದ್ದಾಗ ಏನ್​ ಮಾಡಿದ್ರು, ಆ ಮೇಲೆ ಏನ್​ ಮಾಡಿದ್ರು..? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರ ಒಕ್ಕಲಿಗ ಕಾಳಜಿ ಎಲ್ಲರಿಗೂ ಗೊತ್ತಿದೆ. ಲೋಕಸಭೆ ಎಲೆಕ್ಷನ್​ ಬಂದ್ಮೇಲೆ ಒಕ್ಕಲಿಗರ ಬಗ್ಗೆ ಪ್ರೀತಿ ಬಂದಿದೆ. ಸಿದ್ದರಾಮಯ್ಯನವರು ಈಗ ಒಕ್ಕಲಿಗ ಮಠಕ್ಕೆ ಭೇಟಿ ಕೊಡ್ತಿದ್ದಾರೆ.
ಒಕ್ಕಲಿಗ ನಾಯಕರ ಸಭೆ ಮಾಡಿ ನಮಗೆ ಬೆಂಬಲ ಕೊಡಿ ಎಂದಿದ್ದಾರೆ. ಯಾರು..? ಯಾವಾಗ..? ಹೇಗೆ ನಡ್ಕೊಂಡಿದ್ದಾರೆ ಗೊತ್ತಿದೆ ಎಂದು ಎಚ್​ಡಿಕೆ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊ*ಲೆ ಮಾಡಿದ ಪಾಪಿ ತಾಯಿ – ಪ್ರಕರಣ ದಾಖಲು..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here