Download Our App

Follow us

Home » ರಾಜಕೀಯ » ಸಿದ್ದರಾಮಯ್ಯನವರೇ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ : ಚಂದ್ರಶೇಖರ ಸ್ವಾಮೀಜಿ ಮನವಿ..!

ಸಿದ್ದರಾಮಯ್ಯನವರೇ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ : ಚಂದ್ರಶೇಖರ ಸ್ವಾಮೀಜಿ ಮನವಿ..!

ಬೆಂಗಳೂರು : ಸಿದ್ದರಾಮಯ್ಯನವರೇ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ, ಎಲ್ಲರೂ ಮುಖ್ಯಮಂತ್ರಿಗಳಾಗಿದ್ದಾರೆ, ಡಿಕೆಶಿ ಸಿಎಂ ಆಗಿಲ್ಲ. ಒಳ್ಳೆ ಕೆಲಸ ಮಾಡುವ ಡಿಕೆಶಿಯೂ ಸಿಎಂ ಆಗಬೇಕು ಎಂದು ಡಿ.ಕೆ.ಶಿವಕುಮಾರ್​ ಪರ ಒಕ್ಕಲಿಗ ಸ್ವಾಮೀಜಿ  ಬ್ಯಾಟಿಂಗ್​​​ ಮಾಡಿದ್ದಾರೆ.

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಮ್ಮುಖದಲ್ಲೇ ಒಕ್ಕಲಿಗರ ಸ್ವಾಮೀಜಿ ಈ ರೀತಿ ಮನವಿ ಮಾಡಿದ್ದಾರೆ. ನಿಮ್ಮಿಂದ ಮಾತ್ರ ಡಿಕೆಶಿಯನ್ನು ಸಿಎಂ ಮಾಡಲು ಸಾಧ್ಯ, ಹೀಗಾಗಿ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು. ಸಿದ್ದರಾಮಯ್ಯ ಮನಸ್ಸು ಮಾಡಿದರೆ ಮಾತ್ರ ಅದು ಸಾಧ್ಯವಾಗುತ್ತೆ, ಸಿದ್ದರಾಮಯ್ಯಗೆ ನಾನು ಮತ್ತೊಮ್ಮೆ ನಮಸ್ಕಾರ ಮಾಡುತ್ತೇನೆ. ಡಿ.ಕೆ.ಶಿವಕುಮಾರ್​​ ಅವರನ್ನು ದಯವಿಟ್ಟು ಮುಖ್ಯಮಂತ್ರಿ ಮಾಡಿ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ಡಿಮ್ಯಾಂಡ್​ ಮಾಡಿದ್ದಾರೆ.

ಡಿಕೆಶಿಯನ್ನು ಸಿಎಂ ಮಾಡಿ ಎಂಬ ಸ್ವಾಮೀಜಿ ಸಲಹೆಗೆ ಕಾರ್ಯಕ್ರಮ ಸ್ಥಳದಲ್ಲೇ ರಿಯಾಕ್ಟ್ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ಹೈಕಮಾಂಡ್​ ಏನ್​ ಹೇಳುತ್ತೋ ಹಾಗೆ ಮಾಡ್ತೇವೆ.
ಹೈಕಮಾಂಡ್​ ತೀರ್ಮಾನವೇ ಅಂತಿಮ ಎಂದು ಸ್ವಾಮೀಜಿ ಮನವಿಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಕೆಂಪೇಗೌಡ ದಿನಾಚರಣೆಗೆ ದಳಪತಿಗಳಿಗೆ ನೀಡದ ಆಹ್ವಾನ – ಮಿಸ್ಟೇಕ್ ಆಗಿದೆ ಎಂದ ಡಿಸಿಎಂ ಡಿಕೆಶಿ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here