Download Our App

Follow us

Home » ಅಪರಾಧ » ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಓರ್ವ ಶಂಕಿತನನ್ನು ವಶಕ್ಕೆ ಪಡೆದ NIA..!

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಓರ್ವ ಶಂಕಿತನನ್ನು ವಶಕ್ಕೆ ಪಡೆದ NIA..!

ಬೆಂಗಳೂರು : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಓರ್ವ ಶಂಕಿತನನ್ನು NIA ತಂಡ ವಶಕ್ಕೆ ಪಡೆದಿದೆ. ಅನುಮಾನದ ಮೇಲೆ ಮಿನಾಜ್ @ ಸುಲೇಮಾನ್​​ನ್ನು NIA ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಿನಾಜ್ ಬಳ್ಳಾರಿ ಕೌಲ್ ಬಜಾರ್​​ನ ನಿಷೇಧಿತ PFI ಕಾರ್ಯಕರ್ತನಾಗಿದ್ದು, ISIS ಜೊತೆ ನಂಟು ಹಿನ್ನೆಲೆ ಕಳೆದ ಡಿಸೆಂಬರ್​​ನಲ್ಲಿ ಮಿನಾಜ್​ನ್ನು NIA ಬಂಧಿಸಿತ್ತು.  ಅಂದಿನಿಂದ ಜೈಲಿನಲ್ಲಿದ್ದ ಮಿನಾಜ್​​ನನ್ನು ಬಾಡಿ ವಾರೆಂಟ್ ಮೇಲೆ NIA ಪಡೆದಿದೆ. ಬಾಂಬ್ ಇಟ್ಟವನ ಬಗ್ಗೆ ಸುಳಿವಿಗಾಗಿ ತೀವ್ರ ವಿಚಾರಣೆ ನಡೆಯುತ್ತಿದ್ದು, ಜೈಲಿನಲ್ಲಿ ದೊರೆತ ಕೆಲ ಮಾಹಿತಿಗಳ ಆಧಾರದ ಮೇಲೆ ಈತನ್ನು ವಶಕ್ಕೆ ಪಡೆಯಲಾಗಿದೆ.

ಬಾಂಬ್ ಇಟ್ಟವನಿಗೂ ಈತನಿಗೂ ಸಂಬಂಧ ಇದ್ಯಾ ಎಂದು ವಿಚಾರಣೆ ನಡೆಯಲಿದೆ. ಡಿಸೆಂಬರ್​​ನಲ್ಲಿ ಮೀನಾಜ್ ಸೇರಿ 8 ಮಂದಿ ಶಂಕಿತರನ್ನು NIA ಬಂಧಿಸಿತ್ತು,  ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿಯಲ್ಲಿ NIA ರೇಡ್​ ನಡೆದಿತ್ತು. ಶಂಕಿತರ ಬಳಿ IED ತಯಾರಿಸಲು ಬಳಸುವ ವಸ್ತುಗಳು ಪತ್ತೆಯಾಗಿತ್ತು, ಹಾಗಾಗಿ ಇದೀಗ ಬಾಂಬರ್​ ಜತೆ ಮಿನಾಜ್​​ ಲಿಂಕ್​ ಇರುವ ಶಂಕೆ ಮೇಲೆ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ : ಡೂಪ್ಲಿಕೇಟ್ ಕಾಂಗ್ರೆಸ್​ ಮುಖಂಡರಿಗೆ ನಿಗಮ-ಮಂಡಳಿ ಸ್ಥಾನ ತಪ್ಪಿಸಿದ್ದು ನಾವೇ : K.H.ಮುನಿಯಪ್ಪಗೆ ಕೊತ್ತೂರು ಮಂಜುನಾಥ್ ಟಾಂಗ್..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here