Download Our App

Follow us

Home » ರಾಜಕೀಯ » ಅಧಿವೇಶನದಲ್ಲಿ ಆರ್​​.ಅಶೋಕ್​ ಮತ್ತು ಸಚಿವ ಪರಮೇಶ್ವರ್​ ನಡುವೆ ವಾಕ್​ಸಮರ..!

ಅಧಿವೇಶನದಲ್ಲಿ ಆರ್​​.ಅಶೋಕ್​ ಮತ್ತು ಸಚಿವ ಪರಮೇಶ್ವರ್​ ನಡುವೆ ವಾಕ್​ಸಮರ..!

ಬೆಂಗಳೂರು : ರಾಜ್ಯ ವಿಧಾನಮಂಡಲ​ ಅಧಿವೇಶನ ನಿನ್ನೆ ಆರಂಭವಾಗಿದ್ದು, ಇಂದು ಅಧಿವೇಶನದಲ್ಲಿ ಕಾಂಗ್ರೆಸ್​-ಬಿಜೆಪಿ ವಾಕ್​ಸಮರ ಶುರುವಾಗಿದೆ. ಕಾನೂನು ಸುವ್ಯವಸ್ಥೆ ಮೇಲೆ ಆರ್​​.ಅಶೋಕ್ ಚರ್ಚೆಗೆ ​ಪ್ರಸ್ತಾಪಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಇದೆಯೋ.. ಸತ್ತಿದೆಯೋ..? ಅತ್ಯಾಚಾರ, ಕೊಲೆ ರಾಜ್ಯದಲ್ಲಿ ಹೆಚ್ಚಾಗ್ತಾ ಇವೆ, ಹಲ್ಲೆ, ದರೋಡೆಗಳನ್ನು ಮಟ್ಟ ಹಾಕ್ತಾ ಇಲ್ಲ.
ಕಾನೂನು ಸುವ್ಯವಸ್ಥೆ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್​​.ಅಶೋಕ್​​ ಪಟ್ಟು ಹಿಡಿದಿದ್ದಾರೆ. ಈ ವೇಳೆ ಅಶೋಕ್​ಗೆ ಆರಗ ಜ್ಞಾನೇಂದ್ರ ಹಾಗೂ ಸುನಿಲ್​ಕುಮಾರ್​​ ಸಾಥ್​ ನೀಡಿದ್ದಾರೆ.

ವಿಪಕ್ಷ ನಾಯಕರ ಪ್ರಸ್ತಾಪಕ್ಕೆ ಕಾಂಗ್ರೆಸ್​ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ನಿಮ್ಮ ಕಾಲದಲ್ಲಿ ಮಚ್ಚು-ಲಾಂಗ್​​​ ಸದ್ದು ಮಾಡಿರಲಿಲ್ವಾ..? ಬಿಜೆಪಿ ಕಾಲದಲ್ಲೇ ಕೊಲೆಗಳೇ ನಡೆದಿರಲಿಲ್ವಾ..? ಬೆಂಗಳೂರಲ್ಲಿ ಎಷ್ಟು ಕೊಲೆ ಆದ್ವು.. ರಾಜ್ಯದಲ್ಲಿ ಎಷ್ಟು ಹತ್ಯೆ ಆದವು..? ಎಲ್ಲವನ್ನೂ ಚರ್ಚಿಸೋಣ ಎಂದು ಗೃಹ ಸಚಿವ ಪರಮೇಶ್ವರ್​ ತಿರುಗೇಟು ನೀಡಿದ್ದಾರೆ.

ನಂತರ ಅಕ್ರಮ ಮದ್ಯ ಮಾರಾಟದ ಬಗ್ಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್​​ ಮುನಿರಾಜು ಪ್ರಸ್ತಾಪಿಸಿದ್ದಾರೆ. ಇವತ್ತು ಮನೆ-ಮನೆಯಲ್ಲೂ ಎಣ್ಣೆ ಮಾರ್ತಿದ್ದಾರೆ, ಅಕ್ರಮ ಮದ್ಯ ಮಾರಾಟದಿಂದ ಯುವಕರ ಜೀವ ಬಲಿಯಾಗ್ತಿವೆ. ಮನೆ-ಮನೆಯಲ್ಲಿ ಮಾರೋ ಮದ್ಯಕ್ಕೆ ಕಡಿವಾಣ ಹಾಕಿ, ಮನೆಗಳಲ್ಲಿ ಮದ್ಯ ಮಾರಲು ಕೊಡುವ ಬಾರ್​ಗಳ ಮೇಲೆ ಕ್ರಮ ತಗೊಳ್ಳಿ. ರಾಜ್ಯದಲ್ಲಿ ಅಬಕಾರಿ ಅಧಿಕಾರಿಗಳು ಏನ್​ ಮಾಡ್ತಿದ್ದಾರೆ…? ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಆರ್​​.ಅಶೋಕ್​​, ಆರಗ ಜ್ಞಾನೇಂದ್ರ ಸೇರಿ ಹಲವರ ಸಾಥ್​​​ ನೀಡಿದ್ದು, ಕಠಿಣ ಕಾನೂನು ತರುವ ಸಂಬಂಧ ಶೀಘ್ರ ತೀರ್ಮಾನ ಮಾಡ್ತೇವೆ ಎಂದು
ಪ್ರಶ್ನೋತ್ತರ ವೇಳೆ ಅಬಕಾರಿ ಸಚಿವ ಆರ್​​.ಬಿ.ತಿಮ್ಮಾಪುರ ಉತ್ತರ ನೀಡಿದ್ದಾರೆ.

ಇದನ್ನೂ ಓದಿ : ದೇವೇಗೌಡರ ನಿವಾಸದಲ್ಲಿ ಇಂದು ಮಹತ್ವದ ಸಭೆ..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here