ಬೆಂಗಳೂರು : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ ಸಂಬಂಧ ಈಗಾಗಲೇ ಪೊಲೀಸರು 7 ಮಂದಿಯನ್ನ ಕಸ್ಟಡಿಗೆ ಪಡೆದಿದ್ದಾರೆ. ಆದರೆ FSLಗೆ ಪೊಲೀಸರು ಆಡಿಯೋ, ವಿಡಿಯೋ ಸ್ಯಾಂಪಲ್ ನೀಡಿ ಹಲವು ಗಂಟೆಗಳು ಕಳೆದರೂ ವರದಿ ಬಹಿರಂಗಪಡಿಸಿಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ ಅನುಮಾನ ವ್ಯಕ್ತಪಡಿಸಿದ್ದಾರೆ.
FSL ವರದಿ ಕೈಸೇರಿ 5-6 ಗಂಟೆ ಆಗಿದೆ, ವರದಿ ಬಹಿರಂಗ ಪಡಿಸಲು ಮೀನಾಮೇಷ ಯಾಕೆ..? ಕಾಂಗ್ರೆಸ್ ಸರ್ಕಾರದ ನಡೆ ಅನುಮಾನ ಮೂಡಿಸುತ್ತಿದೆ ಎಂದು ಸರ್ಕಾರದ ನಡೆ ಖಂಡಿಸಿ ಆರ್.ಅಶೋಕ್ ಟ್ವೀಟ್ Xನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದ್ರೋಹಿಗಳ ಪರವಾಗಿದ್ಯಾ..? ಎಂದು ವಿಪಕ್ಷ ನಾಯಕ ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವರದಿ ಬಹಿರಂಗ ಪಡಿಸುತ್ತೀರೋ ಇಲ್ಲವೋ ಎನ್ನುವ ನಡೆಯ ಮೇಲೆ ತಮ್ಮ ಕಾಂಗ್ರೆಸ್ ಪಕ್ಷ ನಿಜವಾಗಿಯೂ ದೇಶಪ್ರೇಮಿಗಳ ಪರ ಇದೆಯೋ ಅಥವಾ ದೇಶದ್ರೋಹಿಗಳ ಪರ ಇದೆಯೋ ಎಂಬುದನ್ನು ಕನ್ನಡಿಗರು ನಿರ್ಧಾರ ಮಾಡುತ್ತಾರೆ ಎಂದು ಅಶೋಕ ಹೇಳಿದ್ದಾರೆ.
ಇದನ್ನೂ ಓದಿ : ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ..!