ಬೆಂಗಳೂರು : ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ಗಳು ಚಿನ್ನದ ಸರ ಕದ್ದಿರೋ ಆರೋಪ ಕೇಳಿಬಂದಿದೆ. ಫೆ.8ರಂದು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಿಂದಾಗಿ ರಾಜೇಶ್ವರಿ ಎಂಬ ಮಹಿಳೆ ನಗರದ ಮೂಡಲಪಾಳ್ಯ ಬಳಿಯ ಶೋಭಾ ಆಸ್ಪತ್ರೆಗೆ ಹೋಗಿದ್ದರು.
ರಾಜೇಶ್ವರಿಯವರು ರಾತ್ರಿ 12 ಗಂಟೆ 30ನಿಮಿಷ ಸುಮಾರಿಗೆ ಹೋಗಿದ್ದು, ಈ ವೇಳೆ ನೈಟ್ ಡ್ಯೂಟಿ ಡಾಕ್ಟರ್ ಇಸಿಜಿ ಮಾಡಿಸಲು ಸೂಚಿಸಿದ್ದಾರೆ. ನರ್ಸ್ ಅಕ್ಷತಾ ಎಂಬವರು ರಾಜೇಶ್ವರಿಯವರನ್ನ ಇಸಿಜಿ ತಪಾಸಣೆಗೆ ಕರೆದೊಯ್ದಿದ್ದಾರೆ. ಇಸಿಜಿ ತಪಾಸಣೆ ವೇಳೆ ರಾಜೇಶ್ವರಿ ಕೊರಳಲ್ಲಿದ್ದ ಚಿನ್ನದ ಸರ ತೆಗೆಯುವಂತೆ ನರ್ಸ್ ಹೇಳಿದ್ದಾಳೆ.
ಈ ವೇಳೆ ನನ್ನ ಗಂಡನನ್ನ ಕರೆಯಿರಿ ಅವ್ರಿಗೆ ಚಿನ್ನದ ಸರ ಕೊಡ್ತೀನಿ ಎಂದು ರಾಜೇಶ್ವರಿ ಹೇಳಿದ್ದಾರೆ. ಆದ್ರೆ ಟೆಸ್ಟ್ ಬೇಗ ಮುಗಿಯುತ್ತೆ ಇಲ್ಲೇ ದಿಂಬಿನ ಕೆಳಗಡೆ ಸರ ಇಡಿ ಎಂದಿದ್ದ ನರ್ಸ್ ಅಕ್ಷತಾ. ನಂತರ ತಪಾಸಣೆ ಮುಗಿದ ಮೇಲೆ ರಾಜೇಶ್ವರಿ ಚಿನ್ನದ ಸರ ಮರೆತು ಹೋಗಿದ್ದರು. ಬೆಳಗ್ಗೆ ಸ್ನಾನ ಮಾಡುವಾಗ ಚಿನ್ನದ ಸರ ಆಸ್ಪತ್ರೆಯಲ್ಲಿ ಬಿಟ್ಟು ಬಂದಿರೋದು ನೆನಪಾಗಿದೆ.
ನಂತರ ಆಸ್ಪತ್ರೆಗೆ ಹೋಗಿ ರಾಜೇಶ್ವರಿ ಚಿನ್ನದ ಸರದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಆಸ್ಪತ್ರೆಯವರು ಚಿನ್ನದ ಸರ ಇಲ್ಲ ಎಂದು ಉತ್ತರಿಸಿದ್ದಾರೆ. ಹಾಗಾಗಿ ಈ ಬಗ್ಗೆ ಆಸ್ಪತ್ರೆಯ ಮೂವರು ಸಿಬ್ಬಂದಿಗಳ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.
ನರ್ಸ್ ಗಳಾದ ಅಕ್ಷತಾ, ಅಧೀನ ಹಾಗೂ ಸ್ವೀಪರ್ ಪ್ರೇಮಮ್ಮ ಎಂಬುವರ ವಿರುದ್ಧ ಗೋವಿಂದರಾಜ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಗೋವಿಂದರಾಜ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ : 5 ಲಕ್ಷ ಲಂಚ ನೀಡದ ಹಿನ್ನೆಲೆ ಕ್ರಷರ್ ಮಾಲೀಕನ ಮೇಲೆ ಹಲ್ಲೆ ಮಾಡಿದ ಭೂ ವಿಜ್ಞಾನಿ..!