Download Our App

Follow us

Home » ರಾಜಕೀಯ » ಬಿಜೆಪಿಯಲ್ಲಿ ಶುರುವಾಯ್ತು ಲೋಕ ಸಮರದ ತಯಾರಿ..

ಬಿಜೆಪಿಯಲ್ಲಿ ಶುರುವಾಯ್ತು ಲೋಕ ಸಮರದ ತಯಾರಿ..

ಬೆಂಗಳೂರು :  ಬಿಜೆಪಿಯಲ್ಲಿ ಲೋಕ ಸಮರದ ತಯಾರಿ ಶುರುವಾಗಿದೆ. ಬೆಂಗಳೂರಿನಲ್ಲಿ ಇಡೀ ದಿನ ರೆಸಾರ್ಟ್​ ಮೀಟಿಂಗ್​​​​ ನಡೆಯಲಿದ್ದು,
50ಕ್ಕೂ ಹೆಚ್ಚು ನಾಯಕರು ಇಂದು ವಿಜಯಸಂಕಲ್ಪ ಸಭೆ ನಡೆಸುತ್ತಾರೆ.

ಮಾಜಿ ಸಿಎಂಗಳಾದ ಬಿಎಸ್​ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದಾನಂದಗೌಡ, ಅರುಣ್​ ಸಿಂಗ್​​​​, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕರ ಆರ್​​.ಅಶೋಕ್​​, ಕೆ.ಎಸ್​.ಈಶ್ವರಪ್ಪ, ಸಿ.ಟಿ.ರವಿ. ಸುನಿಲ್​​ ಕುಮಾರ್​​​​​ ಸೇರಿದಂತೆ ರಾಜ್ಯದ ಹಿರಿಯರ ಸಭೆ ನಡೆಯಲಿದೆ. ಬೆಂಗಳೂರು ಹೊರ ವಲಯದ ರೆಸಾರ್ಟ್​ನಲ್ಲಿ ಸಂಜೆವರೆಗೂ ಚರ್ಚೆ ನಡೆಸಲಿದ್ದಾರೆ.

ಚಿಂತನ-ಮಂಥನ ಸಭೆಯಲ್ಲಿ ಲೋಕಸಭೆ ಎಲೆಕ್ಷನ್​​ಗೆ ರಣತಂತ್ರ ಹೂಡಲಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯೇ ಸಭೆಯಲ್ಲಿ ಪ್ರಮುಖ ವಿಚಾರ ಹಾಗೂ ಯಾವ ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಡೋದು, ಯಾರು ಅಭ್ಯರ್ಥಿ, ಮೈತ್ರಿ ಮಾಡಿಕೊಂಡರೆ ಆಗಬಹುದಾದ ಲಾಭ ಏನು..? ಸೀಟ್​ ಹಂಚಿಕೆ ಕುರಿತು ವರಿಷ್ಠರಿಗೆ ಏನ್​​​ ಅಭಿಪ್ರಾಯ ಹೇಳಬೇಕು..? ಸ್ಥಳೀಯ ಮುಖಂಡರು, ಕಾರ್ಯಕರ್ತರ ನಡುವೆ ಹೊಂದಾಣಿಕೆ ಹೇಗೆ..? ನಾಯಕರು ಈ ಎಲ್ಲಾ ವಿಚಾರಗಳ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ.

 

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here