ಬೆಂಗಳೂರು : ಬಿಜೆಪಿಯಲ್ಲಿ ಲೋಕ ಸಮರದ ತಯಾರಿ ಶುರುವಾಗಿದೆ. ಬೆಂಗಳೂರಿನಲ್ಲಿ ಇಡೀ ದಿನ ರೆಸಾರ್ಟ್ ಮೀಟಿಂಗ್ ನಡೆಯಲಿದ್ದು,
50ಕ್ಕೂ ಹೆಚ್ಚು ನಾಯಕರು ಇಂದು ವಿಜಯಸಂಕಲ್ಪ ಸಭೆ ನಡೆಸುತ್ತಾರೆ.
ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದಾನಂದಗೌಡ, ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕರ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ. ಸುನಿಲ್ ಕುಮಾರ್ ಸೇರಿದಂತೆ ರಾಜ್ಯದ ಹಿರಿಯರ ಸಭೆ ನಡೆಯಲಿದೆ. ಬೆಂಗಳೂರು ಹೊರ ವಲಯದ ರೆಸಾರ್ಟ್ನಲ್ಲಿ ಸಂಜೆವರೆಗೂ ಚರ್ಚೆ ನಡೆಸಲಿದ್ದಾರೆ.
ಚಿಂತನ-ಮಂಥನ ಸಭೆಯಲ್ಲಿ ಲೋಕಸಭೆ ಎಲೆಕ್ಷನ್ಗೆ ರಣತಂತ್ರ ಹೂಡಲಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯೇ ಸಭೆಯಲ್ಲಿ ಪ್ರಮುಖ ವಿಚಾರ ಹಾಗೂ ಯಾವ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಡೋದು, ಯಾರು ಅಭ್ಯರ್ಥಿ, ಮೈತ್ರಿ ಮಾಡಿಕೊಂಡರೆ ಆಗಬಹುದಾದ ಲಾಭ ಏನು..? ಸೀಟ್ ಹಂಚಿಕೆ ಕುರಿತು ವರಿಷ್ಠರಿಗೆ ಏನ್ ಅಭಿಪ್ರಾಯ ಹೇಳಬೇಕು..? ಸ್ಥಳೀಯ ಮುಖಂಡರು, ಕಾರ್ಯಕರ್ತರ ನಡುವೆ ಹೊಂದಾಣಿಕೆ ಹೇಗೆ..? ನಾಯಕರು ಈ ಎಲ್ಲಾ ವಿಚಾರಗಳ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ.