ಬೆಂಗಳೂರು : ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಅರೆಸ್ಟ್ ಆಗಿದ್ದಾರೆ. ಮೊನ್ನೆಯಷ್ಟೇ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿ ದೇವರಾಜೇಗೌಡರನ್ನು SIT ಕಸ್ಟಡಿಗೆ ಪಡೆಯಲು ಚಿಂತನೆ ನಡೆಸುತ್ತಿದೆ.
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂದಿಸಿದಂತೆ SIT ತನಿಖಾ ತಂಡ ದೇವರಾಜೇಗೌಡರ ಮೇಲೆಯೇ ಕಣ್ಣಿಟ್ಟಿದೆ. ದೇವರಾಜೇಗೌಡರನ್ನು ಫೋಕಸ್ ಮಾಡುತ್ತಿರುವ SIT ಕೇಸ್ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲು ಈಗಾಗಲೇ 2 ಎರಡು ನೋಟಿಸ್ ನೀಡಿತ್ತು. ಇದೀಗ ಇದೇ ನೋಟಿಸ್ ಮುಂದಿಟ್ಟುಕೊಂಡು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡರನ್ನು ಪ್ರಜ್ವಲ್ ಕೇಸ್ ಸಂಬಂಧ ಬಾಡಿ ವಾರೆಂಟ್ ಪಡೆದು ವಶಕ್ಕೆ ಕೇಳುವ ಸಾಧ್ಯತೆಯಿದೆ. ಈಗಾಗಲೇ ಹೊಳೆ ನರಸೀಪುರ ಪೊಲೀಸರು ಮೊಬೈಲ್, ದಾಖಲೆ ಪರಿಶೀಲಿಸಿದ್ದಾರೆ. ಇನ್ನು ಹೊಳೆನರಸೀಪುರ ಪೊಲೀಸರು ಕೋರ್ಟ್ಗೆ ಅರ್ಜಿ ಸಲ್ಲಿಸಿ ದೇವರಾಜೇಗೌಡರನ್ನು ಕಸ್ಟಡಿಗೆ ಕೇಳಲಿದ್ದು, SIT ಅಧಿಕಾರಿಗಳು
ಹೊಳೆನರಸೀಪುರ ಪೊಲೀಸರ ಸಂಪರ್ಕದಲ್ಲಿದ್ದಾರೆ.
ಇದನ್ನೂ ಓದಿ : ಮಮ್ಮುಟ್ಟಿ ಜೊತೆ ರಾಜ್ ಬಿ ಶೆಟ್ಟಿ – ದುಬೈನಲ್ಲಿ “ಟರ್ಬೋ” ಟ್ರೈಲರ್ ರಿಲೀಸ್..!