ಚಿಕ್ಕಬಳ್ಳಾಪುರ : ಪ್ರಜ್ವಲ್ ವಿಡಿಯೋ ಬಿಟ್ಟಿದ್ದು ಸಮಾಧಾನ ತಂದಿದೆ. ವಿಚಾರಣೆಗೆ ಹಾಜರಾದ ಮೇಲೆ ಸತ್ಯ ಹೊರ ಬರಲಿದೆ. ಯಾರು ಷಡ್ಯಂತ್ರ ಮಾಡಿದ್ದಾರೆ. ಯಾರ ಕೈವಾಡ ಇದೆ ಎಂಬುದು ಗೊತ್ತಾಗಳಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿದೇಶದಿಂದಲೇ ವಿಡಿಯೋ ರಿಲೀಸ್ ಮಾಡಿದ್ದಾರೆ. ಇದೀಗ ವಿಡಿಯೋ ರಿಲೀಸ್ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಕಾರ್ಯಕರ್ತರ ಬಗ್ಗೆ ಪ್ರಜ್ವಲ್ಗೆ ಮಮತೆ ಇದೆ ಎಂದು ತೋರಿಸಿಕೊಂಡಿದ್ದಾನೆ. ವಾಪಸ್ ಬರುವಂತೆ ನಾನು, ದೇವೇಗೌಡರು ಮನವಿ ಮಾಡಿದ್ವಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೇ.31ರಂದು ಭಾರತಕ್ಕೆ ವಾಪಾಸ್ ಬರ್ತಿನಿ : ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಟ್ಟ ಪ್ರಜ್ವಲ್ ರೇವಣ್ಣ..!
Post Views: 34