ಬೆಂಗಳೂರು : ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬರೋಬ್ಬರಿ ತಿಂಗಳ ನಂತರ ಇದೀಗ ಪ್ರತ್ಯಕ್ಷರಾಗಿದ್ದಾರೆ. ಕೊನೆಗೂ ಮುಖ ತೋರಿಸಿದ ಪ್ರಜ್ವಲ್ ರೇವಣ್ಣ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹರಿ ಬಿಟ್ಟಿದ್ದಾರೆ.
ವಿದೇಶದಿಂದಲೇ ಪ್ರಜ್ವಲ್ ರೇವಣ್ಣ ರಿಲೀಸ್ ಮಾಡಿದ ಮೀಡಿಯಾದಲ್ಲಿ, ಮೇ 31 ರಂದು ಬೆಂಗಳೂರಿಗೆ ಬಂದೇ ಬರ್ತಿನಿ. SIT ವಿಚಾರಣೆಯನ್ನು ನಾನು ಎದುರಿಸುತ್ತೇನೆ. ತಾತ, ತಂದೆ-ತಾಯಿ ಜನರ ಆರ್ಶೀವಾದ ಇದೆ. ನನ್ನ ಕಾರ್ಯಕರ್ತರಿಗೆ ನಾನು ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ನನ್ನ ಪ್ರವಾಸ ಮೊದಲೇ ನಿಗದಿಯಾಗಿತ್ತು. ಏಪ್ರಿಲ್ 26ಕ್ಕೆ ಎಲೆಕ್ಷನ್ ಮುಗಿದಿತ್ತು. ಏಪ್ರಿಲ್ 26 ರಂದು ಕೇಸ್ ದಾಖಲಾಗಲಿಲ್ಲ. ನಾನು ನಿಗದಿತ ಪ್ರವಾಸದಂತೆ ಬಂದಿದ್ದೆ. ಹಾಸನದಲ್ಲಿ ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.
ಇನ್ನೂ ನಾನು ಮಾನಸಿಕ ಖಿನ್ನವಾಗಿದ್ದೆ. ಇಷ್ಟು ದಿನ ಒಂಟಿಯಾಗಿ ರೂಮ್ನಲ್ಲಿದ್ದೇ. ಈ ಬೆಳವಣಿಗೆಯಿಂದ ಡಿಪ್ರೆಶನ್ಗೆ ಹೋಗಿದ್ದೆ. ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ.
ಹಾಸನದಲ್ಲೇ ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ರಾಹುಲ್ ಗಾಂಧಿ ನನ್ನ ಬಗ್ಗೆ ಏನ್ ಮಾತನಾಡಿದ್ದಾರೆ ಗೊತ್ತು. ಷಡ್ಯಂತ್ರದ ಬಗ್ಗೆ ನನಗೆ ಎಲ್ಲಾ ಗೊತ್ತು. ಬೆಂಗಳೂರಿಗೆ ಬಂದ್ಮೇಲೆ ಎಲ್ಲಾವನ್ನು ಹೇಳುವೆ ಎಂದು ನಿಗೂಢ ಸ್ಥಳದಿಂದಲೇ ಪ್ರಜ್ವಲ್ ರೇವಣ್ಣ ವಿಡಿಯೋ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ : ನಟ ಧ್ರುವ ಸರ್ಜಾ ಜಿಮ್ ಟ್ರೈನಿ ಮೇಲೆ ಹ*ಲ್ಲೆ – ದಾಳಿಕೋರರ ಟಾರ್ಗೆಟ್ ಆಗಿದ್ದವರು ಯಾರು..?