Download Our App

Follow us

Home » Uncategorized » ಹೊಸ ವರ್ಷದಂದು ಕಣ್ಣುದಾನ ಮಾಡಿ ಮಾದರಿಯಾದ ಪೊಲೀಸ್ ಕಮಿಷನರ್ ಬಿ ದಯಾನಂದ್..!

ಹೊಸ ವರ್ಷದಂದು ಕಣ್ಣುದಾನ ಮಾಡಿ ಮಾದರಿಯಾದ ಪೊಲೀಸ್ ಕಮಿಷನರ್ ಬಿ ದಯಾನಂದ್..!

ಬೆಂಗಳೂರು : ಬೆಂಗಳೂರು ಪೊಲೀಸ್​ ಕಮಿಷನರ್​​​​ ಬಿ.ದಯಾನಂದ್ ಅವರು  ಹೊಸ ವರ್ಷಕ್ಕೆ​ ಮತ್ತೊಂದು ಮಾದರಿ ಕಾರ್ಯ ಮಾಡಿ ಗಮನ ಸೆಳೆದಿದ್ದಾರೆ. ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ ಕಣ್ಣುದಾನ ಮಾಡಿದ್ದಾರೆ. ಕಣ್ಣುದಾನ ಮಾಡಿ ಪೊಲೀಸರು ಮತ್ತು ನಾಗರಿಕರಿಗೂ ಕಮಿಷನರ್ ಮಾದರಿಯಾಗಿದ್ದಾರೆ.

ನಾರಾಯಣ ನೇತ್ರಾಲಯದ ರಾಜ್ ಕುಮಾರ್ ನೇತ್ರದಾನ ಕೇಂದ್ರವು ಕಮಿಷನರ್​ಗೆ ಪ್ರಶಂಸಾ ಪತ್ರ ನೀಡಿದೆ. ಈ ಬಾರಿ ಹೊಸವರ್ಷಕ್ಕೆ ಸಿಹಿ ತಿನಿಸು, ಹೂ ಗುಚ್ಚ ಬೇಡ.

ನನಗೆ ವಿಶ್​ ಮಾಡಲು ತರುವ ಬೊಕೆ, ಸ್ವೀಟ್ ಹಣವನ್ನು ಅನಾಥಾಶ್ರಮಕ್ಕೆ ಬಳಸಿ ಎಂದು ಕಮಿಷನರ್​​ ಕರೆ ನೀಡಿದ್ದರು. ಹೊಸ ವರ್ಷದ ದಿನ ಅನಾಥಾಶ್ರಮಕ್ಕೆ ಪತ್ನಿ ಸಮೇತ ಭೇಟಿ ನೀಡಿ ವಿಶ್ ಮಾಡಿದ್ದರು. ಇದೀಗ ನೇತ್ರದಾನ ಮಾಡುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮ*ಹತ್ಯೆ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here