ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಬಂಧನ ಭೀತಿ ಎದುರಾಗಿದ್ದು, ಯಡಿಯೂರಪ್ಪಗೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶಿಸಿದೆ.
ಇದೀಗ ವಾರಂಟ್ ಜಾರಿಯಾದ ಕೂಡಲೇ ಬಿಎಸ್ ವೈ ಮೊಬೈಲ್ ಸ್ವಿಚ್ ಆಫ್ ಆಗಿದೆ. ಬಿಎಸ್ ವೈ ಬಂಧನಕ್ಕೆ ಸಿಐಡಿ ತಂಡ 1ನೇ ಸೆಷೆನ್ಸ್ ಕೋರ್ಟ್ ನಿಂದ ವಾರಂಟ್ ಪಡೆದಿತ್ತು. ಆದರೆ ಯಾರ ಸಂಪರ್ಕಕ್ಕೂ ಸಿಗದ ಮಾಜಿ ಸಿಎಂ ಬಿಎಸ್ ವೈಗಾಗಿ DySP ಪೃಥ್ವಿ ನೇತ್ರತ್ವದಲ್ಲಿ ತನಿಖೆ ನಡೆಯುತ್ತಿದೆ.
ವಾರಂಟ್ ಪಡೆದು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿರುವ ಸಿಐಡಿ ತಂಡ ಬೆಂಗಳೂರು, ಶಿವಮೊಗ್ಗ ಸೇರಿ ಬೇರೆ ಸ್ಥಳದಲ್ಲಿ ಮಾಹಿತಿ ಕಲೆ ಹಾಕಿವೆ. ಮೂಲಗಳ ಪ್ರಕಾರ ಬಿಎಸ್ ವೈ ಬೇರೆ ರಾಜ್ಯದಲ್ಲಿರುವ ಮಾಹಿತಿ ಲಭ್ಯವಾಗಿದೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಿಎಸ್ ವೈ ವಿರುದ್ದ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕೇಸ್ ದಾಖಲಾಗಿತ್ತು. ಇದು ವಿಶೇಷ ಪ್ರಕರಣ ಎಂದು ರಾಜ್ಯ ಸರ್ಕಾರ ಸಿಐಡಿಗೆ ವರ್ಗವಣೆ ಮಾಡಿತ್ತು. ಇದೀಗ ವಾರಂಟ್ ಜಾರಿಯಾಗಿದ್ದು, ಯಾವುದೇ ಕ್ಷಣದಲ್ಲಿ ಪೊಲೀಸರು ಬಿಎಸ್ ಯಡಿಯೂರಪ್ಪನವರನ್ನು ಬಂಧನ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : ನನಗೆ ಮೋದಿ ಚಾಲೆಂಜ್ ಕೊಟ್ಟಿದ್ದಾರೆ – ಬೆಂಗಳೂರಿನಲ್ಲಿ ವಿ. ಸೋಮಣ್ಣ ಹೇಳಿಕೆ..!