ಬೆಂಗಳೂರು : ಪ್ರಧಾನಿ ಸೇರಿ ನಮ್ಮ ಎಲ್ಲಾ ನಾಯಕರು ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಇದನ್ನ ನಾನು ಚಾಲೆಂಜ್ ಆಗಿ ತೆಗೆದುಕೊಳ್ಳುತ್ತೇನೆ ಎಂದು ನೂತನ ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ನೂತನ ಸಂಸದ ಸೋಮಣ್ಣಗೆ ಏರ್ಪೋರ್ಟ್ನಲ್ಲಿ ಭರ್ಜರಿ ಸ್ವಾಗತ ಮಾಡಲಾಗಿದೆ. ಬಳಿಕ ಏರ್ಪೋರ್ಟ್ನಲ್ಲಿ ಮಾತನಾಡಿದ ಅವರು, ಎರಡು ಜವಾಬ್ದಾರಿ ಹುದ್ದೆಗಳನ್ನು ನೀಡಿದ್ದಾರೆ. ಅದನ್ನು ನಾನು ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.
ಎರಡು ಖಾತೆಗಳ ಮೂಲಕ ರಾಜ್ಯ ಮತ್ತು ರಾಷ್ಟ್ರದ ಜನರಿಗೆ ಕೊಡಬಹುದಾದ ಸವಲತ್ತುಗಳನ್ನು ಕೊಡುತ್ತೇನೆ. 45 ವರ್ಷದ ಅನುಭವವನ್ನಾ ಇದಕ್ಕೆ ಸಮರ್ಪಣೆ ಮಾಡುತ್ತೇನೆ. ಹತ್ತು ವರ್ಷದಲ್ಲಿ ಆದ ಕೆಲಸಕ್ಕಿಂತ ಎರಡು ಪಟ್ಟು ಕೆಲಸವನ್ನಾ ಪ್ರಧಾನಿಗಳ ಆದೇಶದಂತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮುಂದಿನ ಎರಡು ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಕೆಲಸ ಮಾಡುತ್ತೇವೆ. ನಮ್ಮ ರಾಷ್ಟ್ರ ನಾಯಕರು ನೀಡಿದ ಕೆಲಸವನ್ನಾ ಕಾಯ ವಾಚ ಮನಸ್ಸಾ ಮಾಡುತ್ತೇನೆ. ಬಿಜೆಪಿ ಪಕ್ಷದ ಕೆಲಸ ಮಾಡುವವರನ್ನ ಕೈ ಬಿಡಲ್ಲ ಅನ್ನೋದಕ್ಕೆ ನಾನೇ ಸ್ಪಷ್ಟ ಉದಾಹರಣೆ ಎಂದು ನೂತನ ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಮ*ರ್ಡರ್ ಕೇಸ್ – ಪೊಲೀಸರ ಮುಂದೆ A-8 ಆರೋಪಿ ರವಿ ಸರಂಡರ್..!