ನವದೆಹಲಿ : ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಸತ್ನಲ್ಲಿ ನರೇಂದ್ರ ಮೋದಿ ಅವರು ಮೊದಲ ಭಾಷಣ ಮಾಡಿದರು. ಭಾಷಣದುದ್ದಕ್ಕೂ ರಾಹುಲ್ ಗಾಂಧಿ ಏಟಿಗೆ ಮೋದಿ ತಿರುಗೇಟು ನೀಡಿದ್ದಾರೆ.
ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಪ್ರಧಾನಿ ಮೋದಿ ಮಾತನಾಡಿ, ರಾಷ್ಟ್ರಪತಿಗಳು ನಮಗೆ ಮತ್ತು ದೇಶಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅದಕ್ಕಾಗಿ ಹೃದಯಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ. ನಿನ್ನೆ ಮತ್ತು ಇಂದು ಬಹಳಷ್ಟು ನಾಯಕರು ಈ ಭಾಷಣದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಈ ರೀತಿ ಮಾಡುವುದು ಶೋಭೆಯಲ್ಲ, ನಿನ್ನೆ ನಡೆದ ಘಟನೆಯಿಂದ ಲೋಕತಂತ್ರವನ್ನ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಇನ್ನೂ ಬಾಲಕ ಬುದ್ದಿ ಬಿಟ್ಟಿಲ್ಲ. EVM, ಸಂವಿಧಾನದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದು ಕಾಂಗ್ರೆಸ್ ಕೆಲಸ ಎಂದಿದ್ದಾರೆ.
ಇನ್ನು, ಕಾಂಗ್ರೆಸ್ ದೇಶದ ಜನರ ದಿಕ್ಕು ತಪ್ಪಿಸುತ್ತಿದೆ. 140 ಕೋಟಿ ಜನರ ಮುಂದೆ ಸತ್ಯಾಂಶ ಹೇಳುತ್ತಿದ್ದೇನೆ, ಅಗ್ನಿವೀರ್ MSP ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳಿವೆ. 3 ಬಾರಿ ಸೋತವರ ನೋವು ನನಗೆ ಅರ್ಥವಾಗುತ್ತೆ. ದೇಶದ ಜನರ ಜೊತೆ ಕಾಂಗ್ರೆಸ್ ಆಟವಾಡಿದೆ, ಮತಕ್ಕಾಗಿ ಕಾಂಗ್ರೆಸ್ನವರು ದೇಶ ವಿಭಜನೆಗೆ ಮುಂದಾಗಿದ್ದಾರೆ. ಸಿಂಪತಿ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಹೈಡ್ರಾಮ ಮಾಡಿದೆ, ಸ್ವತಂತ್ರ ಸೇನಾನಿ ವೀರ್ ಸಾವರ್ಕರ್ನ ಅವಮಾನ ಮಾಡಿದ್ದಾರೆ. ದೇಶದ ಜನರ ಸೇವೆ ಮಾಡಲು ನಿಮ್ಮಿಂದ ಆಗಲ್ಲ, ಸುಳ್ಳು ಹೇಳಿಕೊಂಡೆ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ ಎಂದು ವಿಪಕ್ಷಗಳಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಕೋಲಾರ : ಶ್ರೀಗಂಧ ಮರ ಕಳ್ಳತನ ಮಾಡ್ತಿದ್ದ ಖದೀಮರ ಮೇಲೆ ಫೈರಿಂಗ್..!