ಕೋಲಾರ : ಶ್ರೀಗಂಧದ ಮರ ಕಳ್ಳತನ ಮಾಡ್ತಿದ್ದವನ ಕಾಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಘಟನೆ ಜಿಲ್ಲೆಯ ಕಾಶಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಶ್ರೀಗಂಧ ಕಳ್ಳತನಕ್ಕೆ ಯತ್ನಿಸುತ್ತಿದ್ದ ತಾಯಲೂರು ಗ್ರಾಮದ ಭತ್ಯಪ್ಪ ಎಂಬುವನ ಕಾಲಿಗೆ ಗುಂಡು ತಾಗಿದ್ದು, ಮತ್ತೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ.
ಭತ್ಯಪ್ಪ ಆಂಧ್ರ ಪ್ರದೇಶದ ಐವರೊಂದಿಗೆ ಶ್ರೀಗಂಧ ಕಳ್ಳತನಕ್ಕೆ ಬಂದಿದ್ದನು. ಶ್ರೀಗಂಧ ಮರ ಕಳ್ಳತನ ಮಾಡುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಗಾರ್ಡ್ ಅನಿಲ್ ಬಂದಿದ್ದಾರೆ. ಬಳಿಕ, ಶ್ರೀಗಂಧ ಕಳ್ಳತನವನ್ನು ತಡೆಯಲು ಮುಂದಾಗಿದ್ದು, ಶರಣಾಗುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ.
ಆರೋಪಿಗಳು ಗಾರ್ಡ್ ಅನಿಲ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಗಾರ್ಡ್ ಅನಿಲ್ ಭತ್ಯಪ್ಪ ಹಾಗೂ ಈತನ ಸಹಚರನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ಭತ್ಯಪ್ಪನ ಸಹಚರ ಎಸ್ಕೇಪ್ ಆಗಿದ್ದಾನೆ. ಗುಂಡೇಟಿನಿಂದ ನರಳಾಡುತ್ತಿದ್ದ ಭತ್ಯಪ್ಪನನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : MUDA ಹಗರಣದ ಎಲ್ಲಾ ದಾಖಲೆ ನನ್ನ ಬಳಿಯಿದೆ, ಬಹಿರಂಗ ಪಡಿಸ್ತೇನೆ : ಶಾಸಕ ಶ್ರೀವತ್ಸ ಸ್ಫೋಟಕ ಹೇಳಿಕೆ..!