ಬೆಂಗಳೂರು : KIAL ಏರ್ಪೋರ್ಟ್ನ ಕಸ್ಟಮ್ಸ್ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ಮಾಡಿ ಅನಕೊಂಡ ಹಾವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಅರೆಸ್ಟ್ ಮಾಡಿದ್ದಾರೆ.
ಬ್ಯಾಂಕಾಕ್ನಿಂದ ಬೆಂಗಳೂರಿಗೆ 10 ಹಾವುಗಳನ್ನು ಬ್ಯಾಗ್ ಮೂಲಕ ಅಕ್ರಮವಾಗಿ ತರಲಾಗ್ತಿತ್ತು. ಸಕಲೇಶಪುರ ಮೂಲದ ಕಾಫೀ ಪ್ಲಾಂಟರ್ ಕೈಸರ್ ಜಮ್ಮೀಲ್ ಅಹಮ್ಮದ್ ಎಂಬಾತನ ಸೂಟ್ ಕೇಸ್ ತಪಾಸಣೆ ಮಾಡಿದಾಗ ಬಿಳಿ ಚೀಲದಲ್ಲಿ ತಂದಿದ್ದ ಜೀವಂತ ಅನಕೊಂಡ ಹಾವುಗಳು ಪತ್ತೆಯಾಗಿವೆ.
ದಕ್ಷಿಣ ಆಪ್ರೀಕಾದಿಂದ ಈತ ಬ್ಯಾಂಕಾಕ್ ಮೂಲಕ ಬೆಂಗಳೂರಿಗೆ ಅನಕೊಂಡ ಹಾವಿನ ಮರಿಗಳನ್ನು ತರ್ತಿದ್ದ ಎಂದು ಗೊತ್ತಾಗಿದೆ. ಈತನನ್ನು ಅರೆಸ್ಟ್ ಮಾಡಿ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲಾಗ್ತಿದೆ. ವನ್ಯ ಜೀವಿಗಳ ಕಳ್ಳಸಾಗಣೆ ನಿಷೇಧ ಕಾಯಿದೆ ಮತ್ತು ಕಸ್ಟಮ್ಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಬಿಜೆಪಿಯಿಂದ ಕೆ.ಎಸ್ ಈಶ್ವರಪ್ಪ 6 ವರ್ಷ ಉಚ್ಚಾಟನೆ..!
Post Views: 171