ತುಮಕೂರು : 19 ವರ್ಷಗಳ ಹಿಂದೆ ಪಾವಗಡಲ್ಲಿ ನಡೆದಿದ್ದ ನಕ್ಸಲ್ ದಾಳಿಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊತ್ತಗೆರೆ ಶಂಕರ ಬಂಧಿತ ನಕ್ಸಲ್ ಈತ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದ. ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ 19 ವರ್ಷಗಳ ಹಿಂದೆ ನಕ್ಸಲರು ದಾಳಿ ಮಾಡಿದ್ದರು.
ಇದರಲ್ಲಿ 7 ಮಂದಿ ಪೊಲೀಸರು ಮತ್ತು ಒಬ್ಬ ಬಸ್ ಕ್ಲೀನರ್ ಹತ್ಯೆ ಮಾಡಲಾಗಿತ್ತು. ವೆಂಕಟಮ್ಮನಹಳ್ಳಿ ಪೊಲೀಸ್ ಕ್ಯಾಂಪ್ ಮೇಲೆ ದಾಳಿ ಮಾಡಲಾಗಿತ್ತು. ಪ್ರಕರಣದ 32 ಆರೋಪಿಗಳು ತಲೆಮರೆಸಿಕೊಂಡಿದ್ರು. ಈ ಪೈಕಿ ಶಂಕರ್ @ ಕೊತ್ತಗೆರೆ ಶಂಕರ್ @ ಸುಬ್ಬರಾಯಡು ನಾಪತ್ತೆಯಾಗಿದ್ದ.
ಈ ಸಂಬಂಧ ತಿರುಮಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಗೌರಿಪಾಳ್ಯ ವಿಭಾಗದಲ್ಲಿ ಬಿಬಿಎಂಪಿ ಡ್ರೈವರ್ ಆಗಿದ್ದ ಶಂಕರ್ನನ್ನು ಇದೀಗ ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ : ರೇವ್ ಪಾರ್ಟಿಯಲ್ಲಿದ್ದ ನಟಿಯರಿಗೆ ಸಂಕಷ್ಟ ಫಿಕ್ಸ್ : ನಟಿ ಹೇಮಾ ಬ್ಲಡ್ ರಿಪೋರ್ಟ್ ಪಾಸಿಟಿವ್..!
Post Views: 98