ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನ ಹತ್ಯೆ ಸಂಬಂಧ ನಟ ದರ್ಶನ್ ಹಾಗೂ ಅವರ ಗೆಳತಿ ಪವಿತ್ರ ಗೌಡನನ್ನು ಇಂದು ಪೊಲೀಸರು ಅರೆಸ್ಟ್ ಮಾಡಿದ್ದರು. ಸಂಜೆ ಕೋರ್ಟ್ ವಿಚಾರಣೆ ಬಳಿಕ ದರ್ಶನ್, ಪವಿತ್ರ ಸೇರಿ 13 ಮಂದಿಗೆ ಪೊಲೀಸ್ ಕಸ್ಟಡಿ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು.
ಇದೀಗ ಪೊಲೀಸರ ತನಿಖೆಯಲ್ಲಿ ಪವಿತ್ರ ಗೌಡ ಸ್ಪೋಟಕ ಮಾಹಿತಿ ಬಾಯಿಬಿಟ್ಟಿದ್ದಾರೆ. ಅಸಲಿಗೆ ರೇಣುಕಾ ಸ್ವಾಮಿ ಕಾಮೆಂಟ್ ಮಾಡಿರುವುದೇ ಪವಿತ್ರ ಗೌಡಗೆ ಗೊತ್ತಿರಲಿಲ್ಲವಂತೆ. ರಜನಿ ಎಕ್ಸ್ಪ್ರೆಸ್ ಎಂಬ ಯುಟ್ಯೂಬ್ ಚಾನೆಲ್ ನಡೆಸುವ ರಜನಿ ಎಂಬ ಯುಟ್ಯೂಬರ್ ಹಾಗೂ ದರ್ಶನ್ ಪಟಾಲಮ್ಮ ಈ ಯುವತಿ ಪವಿತ್ರ ಗೌಡಗೆ ಮಾಹಿತಿ ಕೊಟ್ಟಿದ್ದಂತೆ. ಅದಾದ ನಂತರ ಪವಿತ್ರ ಗೌಡ ರೊಚ್ಚಿಗೆದ್ದು ದರ್ಶನ್ ಗೆ ಈ ವಿಚಾರ ತಿಳಿಸಿ ನಂತರ ಭೀಕರ ಕೊಲೆಯಲ್ಲಿ ಪ್ರಕರಣ ಅಂತ್ಯವಾಯಿತು.
ವಾಸ್ತವದಲ್ಲಿ ರೇಣುಕಾ ಸ್ವಾಮಿ ಫೇಕ್ ಅಕೌಂಟ್ ಮಾಡಿಕೊಂಡಿದ್ದರು. ಅದನ್ನು ಪತ್ತೆ ಹಚ್ಚಿ ಆ ಮಾಹಿತಿಯನ್ನು ಕೂಡ ಪವಿತ್ರ ಗೌಡಗೆ ಕೊಟ್ಟಿದ್ದು ಇದೇ ರಜನಿ ಎಕ್ಸ್ಪ್ರೆಸ್ ಯೂಟ್ಯೂಬರ್ ರಜಿನಿ. ಪೋಲೀಸರ ಪ್ರಾಥಮಿಕ ತನಿಖೆಯಲ್ಲಿ ನಿನ್ನೆ ಮಧ್ಯಾಹ್ನ ಈ ಮಾಹಿತಿಯನ್ನು ಪವಿತ್ರ ಗೌಡ ಬಾಯಿಬಿಟ್ಟಿದ್ದು, ಪೊಲೀಸರು ರಜನಿಗಾಗಿ ಶೋಧನ ನಡೆಸುತ್ತಿದ್ದಾರೆ.
ಈಗಾಗಲೇ ರಜನಿಯ ಲೊಕೇಶನ್ ಮತ್ತು ಯೂಟ್ಯೂಬ್ ಫೇಸ್ ಬುಕ್ ಇನ್ಸ್ಟಾಗ್ರಾಮ್ ಅಕೌಂಟ್ ಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ರಜಿನಿ ಅಲಿಯಾಸ್ ರಜನಿ ಎಕ್ಸ್ಪ್ರೆಸ್ ಅರೆಸ್ಟ್ ಆಗುವ ಸಾಧ್ಯತೆ ಇದೆ. ದರ್ಶನ್ ಪಟಾಲಮ್ ನಲ್ಲಿ ಈಕೆ ಸೋಶಿಯಲ್ ಮೀಡಿಯಾ ನೋಡಿಕೊಳ್ಳುತ್ತಿದ್ದಳು.