Download Our App

Follow us

Home » ಅಪರಾಧ » ಮುನಿರತ್ನ ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ – ಸಂತ್ರಸ್ತೆ ಸ್ಫೋಟಕ ಹೇಳಿಕೆ..!

ಮುನಿರತ್ನ ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ – ಸಂತ್ರಸ್ತೆ ಸ್ಫೋಟಕ ಹೇಳಿಕೆ..!

ಬೆಂಗಳೂರು : ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತೆ ಮತ್ತಷ್ಟು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂತ್ರಸ್ತೆ ಮಹಿಳೆ, ರಾಜ್ಯದಲ್ಲಿ ಶಾಸಕ ಮುನಿರತ್ನ ಅವರು ಇಬ್ಬರು ಮಾಜಿ ಮುಖ್ಯಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ನನ್ನ ಸಹಾಯ ಪಡೆದೇ ಸಿಎಂಗಳ ಹನಿಟ್ರ್ಯಾಪ್ ಮಾಡಿಸಿದ್ರು. ನನಗೆ ಭದ್ರತೆ ಕೊಡಿ. ಭದ್ರತೆ ಸಿಕ್ಕರೆ, ಮಾಜಿ ಸಿಎಂಗಳ ವಿಡಿಯೋ ರಿಲೀಸ್ ಮಾಡ್ತೇನೆ ಎಂದು ಸಂತ್ರಸ್ತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಾಜಿ ಮಂತ್ರಿ ಮುನಿರತ್ನ ಹನಿಟ್ರ್ಯಾಪ್ ಮಾಡಿದ್ದು ಹೇಗೆ ಎಂಬುದನ್ನು ಸುದ್ದಿಗೋಷ್ಟಿಯಲ್ಲಿ ಇಂಚಿಂಚೂ ಬಿಚ್ಚಿಟ್ಟ ಸಂತ್ರಸ್ತೆ, ನನ್ನನ್ನು ಒಮ್ಮೆ ಮನೆಗೆ ಕರೆದಿದ್ದರು, ಅಲ್ಲಿ ಬಲವಂತ ಮಾಡಿದ್ರು. ದಿವಾನ್ ಕಾಟ್​ ಮೇಲೆ ನನ್ನ ಮೇಲೆ ಅತ್ಯಾಚಾರ ಎಸಗಿದ್ರು. ನನ್ನನ್ನು ಹೆದರಿಸಿ ಬೆದರಿಸಿ, ವಿಡಿಯೋ ಮಾಡಿ ಇಟ್ಟುಕೊಂಡು, ವಿಡಿಯೋ ರಿಲೀಸ್ ಮಾಡೋದಾಗಿ ಹೇಳಿ ನನ್ನಿಂದ ಕೆಲ್ಸ ಮಾಡಿಸಿದ್ದಾರೆ.

ಅದಕ್ಕಾಗಿಯೇ ಮುನಿರತ್ನ ಸಪರೇಟ್​ ಮೊಬೈಲ್ ಇಟ್ಟುಕೊಂಡಿದ್ರು. ಆ ಮೊಬೈಲ್​ನಲ್ಲೇ ಎಲ್ಲರ ವಿಡಿಯೋ ರೆಕಾರ್ಡ್ ಮಾಡಿಸ್ತಿದ್ರು. ನಾನೇ ಆ ಮೊಬೈಲ್ ಬಳಸ್ತಿದ್ದೆ ಎಂದು ಹೇಳಿರೋ ಸಂತ್ರಸ್ತೆ, ಮುನಿರತ್ನಗೆ ಅಷ್ಟೊಂದು ಟೆಕ್ನಿಕಲ್ ನಾಲೆಡ್ಜ್ ಇಲ್ಲ. ಸಿಸಿಟಿವಿ, ಸ್ಟಿಂಗ್ ಕ್ಯಾಮೆರಾ ಎಲ್ಲಾ ಹುಡುಗರು ನೋಡ್ತೋತಿದ್ರು. ಮುನಿರತ್ನ ಪ್ಲಾನ್ ಮಾಡಿ ಎಲ್ರನ್ನೂ ಕಳಿಸಿಕೊಡ್ತಿದ್ರು ಎಂದು ತಿಳಿಸಿದ್ದಾರೆ. 

ಇನ್ನು ಹಲವು ಮಹಿಳೆಯರಿಗೆ ಬೆದರಿಕೆ ಒಡ್ಡಿ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮುನಿರತ್ನ ಹನಿಟ್ರ್ಯಾಪ್ ಗ್ಯಾಂಗ್​ನಲ್ಲಿ AIDS ಪೀಡಿತ ಮಹಿಳೆಯರಿದ್ದಾರೆ. ಆದರೆ ಮಾಜಿ ಸಿಎಂಗಳ ಬಳಿ AIDS ಪೀಡಿತರನ್ನು ಕಳಿಸಿಲ್ಲ. ನನಗೆ ಒಬ್ಬರನ್ನು ಟ್ರ್ಯಾಪ್ ಮಾಡಿರುವುದಷ್ಟೇ ಗೊತ್ತಿದೆ. ಇಬ್ಬರು ಮಾಜಿ ಸಿಎಂಗಳ ವಿಡಿಯೋ ನನ್ನಿಂದಲೇ ಮಾಡಿಸಿರೋದು. ಮಕ್ಕಳನ್ನು ಕೊಲ್ತೇನೆ ಎಂದು ಬೆದರಿಕೆ ಹಾಕಿದ್ದಕ್ಕೆ ವಿಡಿಯೋ ಮಾಡಿದೆ ಎಂದು ಬೆಂಗಳೂರಿನಲ್ಲಿ ಅತ್ಯಾಚಾರ ಸಂತ್ರಸ್ತೆ ಮಹಾಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಆನೇಕಲ್​​ನಲ್ಲಿ ಮತ್ತೆ 14 ಪಾಕಿಸ್ತಾನ್​ ಪ್ರಜೆಗಳು ಅರೆಸ್ಟ್​​.!

Leave a Comment

DG Ad

RELATED LATEST NEWS

Top Headlines

ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್,

Live Cricket

Add Your Heading Text Here