ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ಚುರುಕಾಗಿದೆ. ನಟ ದರ್ಶನ್ ಅವರನ್ನು ಬಂಧಿಸಿದ ಬಳಿಕ ಮತ್ತಷ್ಟು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಮತ್ತಷ್ಟು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ವಿರುದ್ದ ಮೆಗಾ ಎವಿಡೆನ್ಸ್ವೊಂದು ದೊರೆತಿದೆ. ಸಿಸಿಟಿವಿ ದೃಶ್ಯದಲ್ಲಿ ನಟ ದರ್ಶನ್ ಶೆಡ್ಗೆ ಎಂಟ್ರಿ ಆಗ್ತಿರೋ ದೃಶ್ಯ ಬಿಟಿವಿಗೆ ಲಭ್ಯವಾಗಿದೆ. ಈ ಸಿಸಿಟಿವಿ ದೃಶ್ಯದಲ್ಲಿ ಜೂನ್ 8 ಸಂಜೆ 7:30ಕ್ಕೆ ದರ್ಶನ್ ಕಾರು ಶೆಡ್ ಒಳಗೆ ಹೋಗಿತ್ತು. ಜೂನ್ 8 ರಾತ್ರಿ 9:30ಕ್ಕೆ ದರ್ಶನ್ ಕಾರ್ ವಾಪಸ್ ಆಗಿರುವ ರಣರೋಚಕ ದೃಶ್ಯ ಬಿಟಿವಿಗೆ ಸಿಕ್ಕೆದೆ. ಇದೇ
ಶೆಡ್ನಲ್ಲಿ ರೇಣಕಾಸ್ವಾಮಿಗೆ D-ಗ್ಯಾಂಗ್ ಹಲ್ಲೆ ಮಾಡಿದ್ದರು.
ಇದನ್ನೂ ಓದಿ : ರೇಣುಕಾಸ್ವಾಮಿ ಹತ್ಯೆ ಕೇಸ್ : ಪ್ರಕರಣದ ಉನ್ನತ ತನಿಖೆಗೆ ಆಗ್ರಹಿಸಿದ ಜಂಗಮ ಸಮುದಾಯದ ಮುಖಂಡರು..!
Post Views: 399