Download Our App

Follow us

Home » ರಾಜಕೀಯ » ಮುಡಾ ಹಗರಣ : ಸಿಎಂ ಸಿದ್ದರಾಮಯ್ಯ ತವರಲ್ಲೇ ಪಾದಯಾತ್ರೆ ಮಾಡಲು ಮೈತ್ರಿ ನಾಯಕರ ತಯಾರಿ..!

ಮುಡಾ ಹಗರಣ : ಸಿಎಂ ಸಿದ್ದರಾಮಯ್ಯ ತವರಲ್ಲೇ ಪಾದಯಾತ್ರೆ ಮಾಡಲು ಮೈತ್ರಿ ನಾಯಕರ ತಯಾರಿ..!

ಬೆಂಗಳೂರು : ಮೂಡಾ ಹಗರಣದ ವಿರುದ್ಧ ವಿಧಾನಮಂಡಲದೊಳಗೆ ಅಹೋರಾತ್ರಿ ಧರಣಿ ಮೂಲಕ ಹೋರಾಟ ನಡೆಸಿದ ಬಿಜೆಪಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆಯಬೇಕು ಹಾಗೂ ಈ ಹರಣದ ತನಿಖೆಯನ್ನು CBIಗೆ ವರ್ಗಾಯಿಸುವಂತೆ ಬಿಗಿ ಪಟ್ಟು ಹಿಡಿದಿತ್ತು. ಇದೀಗ ಮುಡಾ ಹೋರಾಟ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ತವರಲ್ಲೇ ಪಾದಯಾತ್ರೆ ಮಾಡಲು ತಯಾರಾಗಿರುವ ಮೈತ್ರಿ ನಾಯಕರು ಭಾನುವಾರ ಹೈವೋಲ್ಟೇಜ್​ ಸಭೆ ನಡೆಸಲಿದ್ದಾರೆ.

ಮತ್ತೊಂದು ಬೃಹತ್​ ಹೋರಾಟಕ್ಕೆ ಸಜ್ಜಾದ ಕೇಸರಿ ಪಡೆ, ಮುಡಾ ಹೋರಾಟ ವಿಚಾರವಾಗಿ ಭಾನುವಾರ ಹೈವೋಲ್ಟೇಜ್​ ಸಭೆ ನಡೆಸಲಿದೆ. ಈ ಸಭೆಯಲ್ಲಿ ಬೆಂಗಳೂರು ಟು ಮೈಸೂರು ಪಾದಯಾತ್ರೆ ಬಗ್ಗೆ ಹಾಗೂ ಸೋಮವಾರ ಅಥವಾ ಬುಧವಾರ ಪಾದಯಾತ್ರೆ ಹೋಗುವ ಪ್ಲಾನ್ ಬಗ್ಗೆಯೂ ಬಿಜೆಪಿ-ಜೆಡಿಎಸ್​ ನಾಯಕರು ಚರ್ಚೆ ನಡೆಸಲಿದ್ದಾರೆ.

ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್​.ಅಶೋಕ್​ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಹಲವು ನಾಯಕರು ಭಾಗಿಯಾಗುವ ಸಾಧ್ಯತೆಯಿದೆ. ಇನ್ನು ಮೈತ್ರಿ ನಾಯಕರು ನಡೆಸಲಿರುವ ಹೋರಾಟದ ರೂಟ್ ಮ್ಯಾಪ್ ಹೇಗೆ ಇರಬೇಕೆಂದು ಕೂಡ ಈ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ : ‘ಪೌಡರ್’ ಸಿನಿಮಾದ ಎರಡನೇ ಸಾಂಗ್​​ ರಿಲೀಸ್​​ – ಆ.15ಕ್ಕೆ ಚಿತ್ರ ತೆರೆಗೆ..!

Leave a Comment

DG Ad

RELATED LATEST NEWS

Top Headlines

ಪ್ಲೀಸ್‌ ಒಂದು ಚಾನ್ಸ್​ ಕೊಡಿ ಬಿಗ್​ಬಾಸ್… ಜಗದೀಶ್, ರಂಜಿತ್ ಹೊರಹೋಗ್ತಿದ್ದಂತೆ ಕಣ್ಣೀರಿಟ್ಟ ಸ್ಪರ್ಧಿಗಳು..!

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆಯುತ್ತಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ

Live Cricket

Add Your Heading Text Here