Download Our App

Follow us

Home » ರಾಜಕೀಯ » ಇಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ ಎಂಟ್ರಿ – 2 ದಿನ ಉತ್ತರ ಕರ್ನಾಟಕದಲ್ಲಿ ಮತಬೇಟೆ..!

ಇಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ ಎಂಟ್ರಿ – 2 ದಿನ ಉತ್ತರ ಕರ್ನಾಟಕದಲ್ಲಿ ಮತಬೇಟೆ..!

ಬೆಳಗಾವಿ : ಕರ್ನಾಟಕದ ಲೋಕ ಅಖಾಡದಲ್ಲಿ ಮೊದಲ ಹಂತದ ಮತಯುದ್ಧ ಅಂತ್ಯವಾಗಿದೆ. ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. ಇದೀಗ ರಾಜ್ಯದಲ್ಲಿ ಎರಡನೇ ಹಂತದ ಕ್ಷೇತ್ರಗಳತ್ತ ರಾಜಕೀಯ ನಾಯಕರ ಚಿತ್ತ ಹರಿದಿದೆ. ಕರ್ನಾಟಕದಲ್ಲಿನ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಬಿಜೆಪಿ ಮಾಸ್ಟರ್​ ಪ್ಲಾನ್​ ಮಾಡಿದ್ದು, ಇವತ್ತು ಪ್ರಧಾನಿ ಮೋದಿ ರಾಜ್ಯಕ್ಕೆ ರೀ ಎಂಟ್ರಿ ಕೊಡಲಿದ್ದಾರೆ.

ಇವತ್ತು ರಾತ್ರಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ನಾಳೆ ನಾಡಿದ್ದು ಉತ್ತರ ಕರ್ನಾಟಕದಲ್ಲಿ ಮತಶಿಕಾರಿ ನಡೆಸಲಿದ್ದಾರೆ. 2 ದಿನಗಳ ಕಾಲ ಪ್ರಧಾನಿ ಮೋದಿ ರಾಜ್ಯದಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ನಾಳೆ ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ​ಸಮಾವೇಶ ನಡೆಸಲಿದ್ದು, ಮಾಲಿನಿ ಸಿಟಿ ಮೈದಾನದಲ್ಲಿ ಜಗದೀಶ್ ಶೆಟ್ಟರ್ ಪರ  ಮೋದಿ ಮತಯಾಚನೆ ಮಾಡಲಿದ್ದಾರೆ.

ಬೆಳಗಾವಿಯಲ್ಲಿ ಇಂದು ರಾತ್ರಿ ನಮೋ ವಾಸ್ತವ್ಯ ಹೂಡಲಿದ್ದಾರೆ. ಇಂದು ಮೋದಿ ವಾಸ್ತವ್ಯ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್​​​ ಮಾಡಲಾಗಿದೆ. ಮೋದಿ ಉಳಿಯುವ ITC ವೆಲ್​​ಕಮ್​​ ಹೋಟೆಲ್​ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಹೋಟೆಲ್​ಗೆ  50-60 SPG ಭದ್ರತಾ ಸಿಬ್ಬಂದಿ ಸುಪರ್ದಿಗೆ ನೀಡಲಾಗಿದೆ. ಕಾಕತಿ ಬಳಿ ಇರುವ ಹೋಟೆಲ್​​ನಲ್ಲಿ ನಾಲ್ಕೈದು ದಿನಗಳಿಂದ ಪರಿಶೀಲನೆ ನಡೆಸಲಾಗಿದೆ.

ನಾಳಿನ ಸಮಾವೇಶಕ್ಕೆ 75 ಸಾವಿರ ಕುರ್ಚಿ ವ್ಯವಸ್ಥೆ, 60 LED ಪರದೆ, 500 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಬಿಜೆಪಿ ಸಮಾವೇಶಕ್ಕೆ ಬೆಳಗಾವಿಯಲ್ಲಿ ಅಂತಿಮ ತಯಾರಿ ನಡೆಯುತ್ತಿದ್ದು, ಏಪ್ರಿಲ್​​​​​​​ 29ರಂದು ಕೂಡ ಕರ್ನಾಟಕದಲ್ಲಿ ನಮೋ ಮತಬೇಟೆ ನಡೆಸಲಿದ್ದಾರೆ. ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಉತ್ತರಕನ್ನಡದಲ್ಲಿ ಪ್ರಚಾರ ಸಭೆ ಇರಲಿದೆ.

ಇದನ್ನೂ ಓದಿ : ಸ್ಟ್ರಾಂಗ್ ರೂಂನಲ್ಲಿ ಭದ್ರವಾಯ್ತು ಅಭ್ಯರ್ಥಿಗಳ ಭವಿಷ್ಯ – ಏಳು ಸುತ್ತಿನ ಕೋಟೆ ಮಾದರಿ ಭದ್ರತೆ ಕಲ್ಪಿಸಿದ ಪೊಲೀಸರು..! –

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here