ರಾಯಚೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆ ರಾಜ್ಯದ ಹಲವೆಡೆ ದಾಳಿ ಮಾಡಿದ್ದಾರೆ. ಮಾಜಿ ಸಚಿವ ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್ ಸೇರಿದಂತೆ ಹಲವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ನಂತರ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಹರೀಶ್ನ್ನೂ ಅರೆಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಶಾಸಕ ದದ್ದಲ್ ಮಾಜಿ PA ಪಂಪಣ್ಣನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸತತ ವಿಚಾರಣೆ ನಡೆಸಿದ ಬಳಿಕ ಪಂಪಣ್ಣನ್ನು ರಾಯಚೂರಿನ ನಿವಾಸದಲ್ಲೇ ED ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಪಂಪಣ್ಣ ನಿವಾಸದಲ್ಲಿದ್ದ ಸ್ಕ್ಯಾನರ್, ಪ್ರಿಂಟರ್ನ್ನು ಇಡಿ ಸೀಜ್ ಮಾಡಿದ್ದು, 2 ಬ್ಯಾಗ್ ದಾಖಲೆ ಸಮೇತ ಪಂಪಣ್ಣ ಅರೆಸ್ಟ್ ಮಾಡಿದೆ.
ಇಡಿ ರೇಡ್ ಬಳಿಕ ನಾಪತ್ತೆಯಾಗಿದ್ದ ದದ್ದಲ್ ಮಾಜಿ PA ಪಂಪಣ್ಣನ್ನು ರಾಯಲ್ಫೋರ್ಟ್ ಅಪಾರ್ಟ್ಮೆಂಟ್ನಲ್ಲಿ ಇಡಿ ಅರೆಸ್ಟ್ ಮಾಡಿದೆ. ನಿನ್ನೆಯಿಂದಲೂ ED ಪಂಪಣ್ಣನನ್ನ ಎನ್ಕ್ವೈರಿ ಮಾಡ್ತಿತ್ತು, ಕೊನೆಗೂ ದದ್ದಲ್ ಮಾಜಿ PA ಪಂಪಣ್ಣನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ರಾಮನಗರ ಹೆಸರು ಬದಲಿಸುವ ಸಾಹಸಕ್ಕೆ ಕೈಹಾಕಿದ್ರೆ ಸರಿಯಿರಲ್ಲ : ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ವಾರ್ನಿಂಗ್..!