ಬೆಂಗಳೂರು : ಟ್ಯೂಷನ್ಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದ ಘಟನೆ ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿ ನಡೆದಿತ್ತು. 12 ವರ್ಷದ ಪರಿಣವ್ ನಾಪತ್ತೆಯಾಗಿದ್ದ ವಿದ್ಯಾರ್ಥಿಯಾಗಿದ್ದಾನೆ.
ಬಾಲಕ ಪರಿಣವ್ ಸುಖೇಶ್ ಹಾಗೂ ನಿವೇದಿತಾ ದಂಪತಿ ಪುತ್ರನಾಗಿದ್ದು, ಭಾನುವಾರ ಟ್ಯೂಷನ್ಗೆ ಹೋಗಿದ್ದಾಗ ಬಾಲಕ ನಾಪತ್ತೆಯಾಗಿದ್ದಾನೆ. ಮನೆಯಿಂದ ಬಾಲಕನನ್ನು ತಂದೆ ಟ್ಯೂಷನ್ಗೆ ಬಿಟ್ಟು ಬಂದಿದ್ದಾರೆ. ಆದರೆ ಟ್ಯೂಷನ್ ಮುಗಿದ ಬಳಿಕ ಮಗನನ್ನು ಕರೆದುಕೊಂಡು ಬರುವುದು ಸ್ವಲ್ಪ ತಡವಾಗಿದ್ದು, ಸ್ಥಳಕ್ಕೆ ಬಂದು ನೋಡಿದಾಗ ಆತ ಸ್ಥಳದಲ್ಲಿ ಇರಲಿಲ್ಲ.
ಭಾನುವಾರ ಮಧ್ಯಾಹ್ನದಿಂದಲೇ ಬಾಲಕ ನಾಪತ್ತೆಯಾಗಿದ್ದು, ಪರಿಣವ್ ತನ್ನ ಟ್ಯೂಷನ್ ಬಳಿ ಬಿಎಂಟಿಸಿ ಬಸ್ ಹತ್ತಿರೋ ಸಿಸಿಟಿವಿ ದೃಶ್ಯ ಸಿಕ್ಕಿತ್ತು. ಬಾಲಕ ಮೈಸೂರಿಗೆ ಹೋಗಿ ರೈಲಿನ ಮೂಲಕ ಚೆನ್ನೈ ತಲುಪಿದ್ದ. ಚೆನ್ನೈನಿಂದ ಮತ್ತೆ ಹೈದ್ರಾಬಾದ್ಗೆ ಹೋಗಿದ್ದ.
ಸೋಷಿಯಲ್ ಮೀಡಿಯಾದಲ್ಲಿ ಪರಿಣವ್ ನಾಪತ್ತೆ ಸುದ್ದಿ ವೈರಲ್ ಆಗಿತ್ತು. ಫೋಟೋ ಹಾಕಿ ಪ್ರತಿಯೊಬ್ಬರೂ ಮಾಹಿತಿಗೆ ಮನವಿ ಮಾಡಿದ್ರು, ಕೊನೆಗೆ ಹೈದ್ರಾಬಾದ್ ಮೆಟ್ರೋ ರೈಲಲ್ಲಿ ಬಾಲಕ ಇರೋ ಮಾಹಿತಿ ಪತ್ತೆಯಾಗಿದೆ.
ಇದನ್ನೂ ಓದಿ : ದೆಹಲಿಗೆ ತೆರಳಿದ ಬಿಜೆಪಿ ನಾಯಕ : ಲೋಕಸಭೆ ಟಿಕೆಟ್ಗೆ ಡಾ. ಕೆ ಸುಧಾಕರ್ ಕಸರತ್ತು..!