ಬೆಂಗಳೂರು : ಸಿಎಂ ಕಾರ್ಯದರ್ಶಿಯವರ ಪಿಎ ಎಂದು ಮಹಿಳಾ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಕ್ರಂ ಗೋಪಾಲಸ್ವಾಮಿ ಎಂಬುವನನ್ನು ಬಂಧಿಸಿ ವಿಚಾರಣೆ ಮಾಡಲಾಗ್ತಿದೆ. ಎಂಎಸ್ ಬಿಲ್ಡಿಂಗ್ ನಲ್ಲಿ ಕಂದಾಯ ಇಲಾಖೆ ಅಧಿಕಾರಿ ಚಲನವಲನವನ್ನು ಈ ವ್ಯಕ್ತಿ ಗಮನಿಸುತ್ತಿದ್ದ.
ತಾನು ಸಿಎಂ ಕಾರ್ಯದರ್ಶಿ ಅವರ ಪಿಎ, ಕಂದಾಯ ಸಚಿವರ ಪಿಎ ಎಂದು ಹೇಳಿಕೊಂಡಿದ್ದ ಆಸಾಮಿ, ಡಿಜಿ ಕಚೇರಿ, ಕಮೀಷನರ್ ಕಚೇರಿಯಿಂದ ಫೋನ್ ಮಾಡ್ತಿದ್ದೇನೆ ಎಂದು ಹೇಳಿ ಬೆದರಿಸುತ್ತಿದ್ದ. ಕಂದಾಯ ಇಲಾಖೆ ಮಹಿಳಾ ಅಧಿಕಾರಿ ಬಗ್ಗೆ ವಿವರಗಳನ್ನ ಕಲೆ ಹಾಕಿದ್ದ ಮಾಹಿತಿ ತಿಳಿದು ವಿಧಾನಸೌಧ ಪೊಲೀಸ್ ಠಾಣೆಗೆ ಅಧಿಕಾರಿ ದೂರು ನೀಡಿದ್ದರು.
ಅರೆಸ್ಟ್ ಮಾಡಿ ವಿಚಾರಿಸಿದಾಗ ಈತ ನಿವೃತ್ತ ಯೋಧರೊಬ್ಬರ ಮಗ ಅಂತಾ ಗೊತ್ತಾಗಿದೆ. ತಂದೆಯ ಹೆಸರು ಹೇಳಿಕೊಂಡು ವಿಧಾನಸೌಧ, ಎಂಎಸ್ ಬಿಲ್ಡಿಂಗ್ಗಳಲ್ಲಿ ಈತ ಓಡಾಡುತ್ತಿದ್ದ. ಸರ್ಕಾರಿ ಅಧಿಕಾರಿಗಳ ವಿವರ ತಿಳಿದು ಬ್ಲಾಕ್ ಮೇಲ್ ಮಾಡಿರೋ ಶಂಕೆ ಇದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಯುವಕನ ಮೇಲೆ ಆ್ಯಸಿಡ್ ಅಟ್ಯಾಕ್ : ಪ್ರೇಯಸಿ ಕಡೆಯವರಿಂದ ಕೃತ್ಯ ಶಂಕೆ..!