Download Our App

Follow us

Home » ಮೆಟ್ರೋ » 24 ಗಂಟೆಗಳಲ್ಲೇ ಖಾಸಗಿ ಬಸ್ ರೌಡಿಸಂಗೆ ಅಂತ್ಯ ಹಾಡಿದ ಬಿಟಿವಿ – ನರಕ ಸೃಷ್ಟಿಸ್ತಿದ್ದ ಖಾಸಗಿ ಬಸ್​ಗಳಿಂದ ಮೆಜೆಸ್ಟಿಕ್​​ಗೆ ಮುಕ್ತಿ..!

24 ಗಂಟೆಗಳಲ್ಲೇ ಖಾಸಗಿ ಬಸ್ ರೌಡಿಸಂಗೆ ಅಂತ್ಯ ಹಾಡಿದ ಬಿಟಿವಿ – ನರಕ ಸೃಷ್ಟಿಸ್ತಿದ್ದ ಖಾಸಗಿ ಬಸ್​ಗಳಿಂದ ಮೆಜೆಸ್ಟಿಕ್​​ಗೆ ಮುಕ್ತಿ..!

ಬೆಂಗಳೂರು :  ರಾಜಧಾನಿ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್​ನಲ್ಲಿ ದಿನ ನಿತ್ಯ ಸಾವಿರಾರು ಜನರು ಒಡಾಡ್ತಾರೆ. ಕಾಲಿಡಲು ಜಾಗವಿಲ್ಲದಷ್ಟು ಬ್ಯುಸಿ ಏರಿಯಾದಲ್ಲಿ ರಾತ್ರಿಹಗಲು ಖಾಸಗಿ ಬಸ್​ಗಳ ದರ್ಬಾರ್ ನಡೆಯುತ್ತಿತ್ತು. ಆದರೆ ಮೊನ್ನೆ ಬಸ್​ ಹೊತ್ತಿದ ಪ್ರಕರಣ ಹಿಂದೆ ಬಿದ್ದ ಬಿಟಿವಿಗೆ ದಶಕಗಳಿಂದ ಮೆಜೆಸ್ಟಿಕ್​ನಲ್ಲಿ ನಡೆಯುತ್ತಿರುವ ಖಾಸಗಿ ಬಸ್ಸ್​ಗಳ ಪಾರ್ಕಿಂಗ್ ದಂಧೆ ವಿಚಾರ ತಿಳಿದು ಬಂದಿತ್ತು. ಆದರೆ ಇದೀಗ ಸತತ ಕಾರ್ಯಚರಣೆ ನಡೆಸಿ ಕೊನೆಗೂ ಖಾಸಗಿ ಬಸ್ ಮಾಫಿಯಾಗೆ ಬಿಟಿವಿ ಮೂಗುದಾರ ಹಾಕಿದೆ.

ಹೌದು, ಖಾಸಗಿ ಬಸ್ ಮಾಫಿಯಾ ಜೊತೆ ಖುದ್ದು ಪೊಲೀಸರ ಶಾಮೀಲಾಗಿದ್ದರು. ಬೆಳಗ್ಗೆ ಬಸ್​ ನಿಲ್ಲಿಸಿದ್ಮೇಲೆ ಬಸ್​ಗಳಲ್ಲಿ ಸಿಬ್ಬಂದಿ ಮಾಡಿದ್ದೇ ದರ್ಬಾರ್. ಖಾಸಗಿ ಬಸ್​​ನಲ್ಲೇ ಬಾರ್, ರೆಸ್ಟೋರೆಂಟ್, ಲಾಡ್ಜ್​ಗಳು.  ಅಷ್ಟೇ ಅಲ್ಲದೇ ನೋ ಪಾರ್ಕಿಂಗ್ ಸ್ಥಳದಲ್ಲಿ ಬಸ್ ಪಾರ್ಕ್​ ಮಾಡಿ ರಸ್ತೆ ಬದಿಯಲ್ಲೇ ಖಾಸಗಿ ಬಸ್​ ರಿಪೇರಿ ಮಾಡುವುದರಿಂದ ರಸ್ತೆಯಲ್ಲಿ ಆಯಿಲ್​​ಗಳು ಹರಿದಾಡುತ್ತಿತ್ತು. ಆಯಿಲ್​ ಬಿದ್ದ ರಸ್ತೆಯಲ್ಲಿ ನೂರಾರು ಬೈಕ್​ ಸವಾರರು ಸ್ಕಿಡ್​ ಆಗಿ ಸಾವು-ನೋವು ಸಂಭವಿಸಿದೆ. ಆದರೆ  ಖಾಸಗಿ ಬಸ್​ಗಳ ಆಟಾಟೋಪದಿಂದ ಸಾವನ್ನಪ್ಪಿದವರ ರೆಕಾರ್ಡ್​ ಸಿಗುತ್ತಿರಲಿಲ್ಲ. ಯಾಕಂದ್ರೆ  ಪೊಲೀಸರು ಕೇಸ್​ ಮುಚ್ಚಿ ಹಾಕುತ್ತಿದ್ದರು. ಈ ಘಟನೆಗಳಿಗೆ ಪ್ರಮುಖ ಕಾರಣ ಬಸ್​ ಮಾಲೀಕರ ಜೊತೆ ಪೊಲೀಸರ​ ಅಡ್ಜಸ್ಟ್​ಮೆಂಟ್.

ಪೊಲೀಸರೇ  ಹಲವು ಬಸ್​ ಕಂಪನಿಗಳಿಂದ 1-2 ಕೋಟಿ ಲಂಚ ವಸೂಲಿ ಮಾಡುತ್ತಿರುವ ಆಡಿಯೋ ಬಿಟಿವಿಗೆ ಲಭ್ಯವಾಗಿತ್ತು. ಇಷ್ಟೇ ಅಲ್ಲದೇ ಮೆಜೆಸ್ಟಿಕ್​ನಲ್ಲಿ ನಡೆಯುತ್ತಿದ್ದ ಹಲವು ಘಟನೆಗಳ ಬಗ್ಗೆ ಸಾರ್ವಜನಿಕರು ಬಿಟಿವಿಗೆ ನೂರಾರು ವಿಡಿಯೋಗಳನ್ನು ರವಾನೆ ಮಾಡಿದ್ದರು. ಈ ವಿಡಿಯೋಗಳ ಬೆನ್ನತ್ತಿದ್ದ ಬಿಟಿವಿಗೆ ಮಜೆಸ್ಟಿಕ್​ನಲ್ಲಿ ನಿತ್ಯ ನಡೆಯುತ್ತಿದ್ದ ನರಕದ ಕರಾಳ ದೃಶ್ಯ ಬಯಲಾಗಿತ್ತು.

ಇದೀಗ, ಬಿಟಿವಿ ಕಾರ್ಯಾಚರಣೆಗೆ ಬೆಚ್ಚಿಬಿದ್ದ ಲಂಚಕೋರ ಪೊಲೀಸರು ಸುತ್ತಮುತ್ತ ಬಸ್​ ನಿಲ್ಲಿಸದಂತೆ ಮೆಸೇಜ್ ರವಾನೆ ಮಾಡಿದ್ದಾರೆ. ಬೆಂಗಳೂರು ಇತಿಹಾಸದಲ್ಲಿಯೇ ಅತಿ ದೊಡ್ಡ ಇಂಪ್ಯಾಕ್ಟ್ ಎಂಬಾಂತೆ  24 ಗಂಟೆಗಳಲ್ಲೇ ಖಾಸಗಿ ರೌಡಿಸಂಗೆ ಬಿಟಿವಿ ಅಂತ್ಯ ಹಾಡಿದೆ. ಇಷ್ಟು ದಿನ ಮೆಜೆಸ್ಟಿಕ್​ನ ರೋಡ್​ಗಳಲ್ಲಿ ಖಾಸಗಿ ಬಸ್​ಗಳ ಸಾಮ್ರಾಜ್ಯ ನಡೆಯುತ್ತಿತ್ತು. ಆದರೆ ಇಂದು ಮೆಜೆಸ್ಟಿಕ್​​ಗೆ ನರಕ ಸೃಷ್ಟಿಸಿದ್ದ ಖಾಸಗಿ ಬಸ್​ಗಳಿಂದ ಮುಕ್ತಿ ದೊರೆತಿದೆ. ಮೊದಲ ಬಾರಿಗೆ ಜನರು ಕ್ಲೀನ್ & ಫ್ರೀ ಮೆಜೆಸ್ಟಿಕ್​ ನೋಡುವಂತಾಗಿದೆ.

ಇದನ್ನೂ ಓದಿ : ದೇವೇಗೌಡರ ಮೊಮ್ಮಗನ ಸೋಲಿಸಲು ಮಾಸ್ಟರ್ ಪ್ಲಾನ್ – ಇಂದು ದಳಪತಿಗಳ ಕೋಟೆಯಲ್ಲಿ ಸಿದ್ದು, ಡಿಕೆಶಿ ಅಬ್ಬರದ ಪ್ರಚಾರ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here