ಚಿತ್ರದುರ್ಗ : ಜಿಲ್ಲೆಯಲ್ಲಿಂದು ಬೆಳ್ಳಂಬೆಳಗ್ಗೆ ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. PWD ನಿವೃತ್ತ ಸೂಪರಿಂಟೆಂಡೆಂಡ್ ಎಂಜಿನಿಯರ್ ರವೀಂದ್ರಪ್ಪ, BBMP ಸೂಪರಿಂಟೆಂಡೆಂಟ್ ಇಂಜಿನಿಯರ್ ಜಗದೀಶ್ ಮನೆಯಲ್ಲಿ ದಾಳಿ ಮಾಡಿ, ಶೋಧ ನಡೆಸುತ್ತಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ನಿವೃತ್ತ SE ರವೀಂದ್ರಪ್ಪ ಅವರ ಚಿತ್ರದುರ್ಗದ ವಿನಾಯಕ ಬಡಾವಣೆಯಲ್ಲಿರುವ ಮನೆ ಮೇಲೆ ಲೋಕಾ ರೇಡ್ ಮಾಡಿದೆ. ಹಾಗೆಯೇ ಐಮಂಗಲ ಬಳಿಯಿರುವ ಬಾಟಲಿಂಗ್ ಫ್ಯಾಕ್ಟರಿ, ಹಿರಿಯೂರು ತಾಲ್ಲೂಕಿನ ಮುಂಗುಸುವಳ್ಳಿ ಮನೆ, ರವೀಂದ್ರಪ್ಪ ಮನೆ, ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ.
ರವೀಂದ್ರಪ್ಪ JDS ಹಿರಿಯೂರು ಅಭ್ಯರ್ಥಿಯಾಗಿ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಚುನಾವಣೆ ವೇಳೆ ರವೀಂದ್ರಪ್ಪ ನಿವಾಸದ ಮೇಲೆ IT ದಾಳಿ ನಡೆಸಿತ್ತು. ಇಂದು ಎರಡು ಕಾರ್ಗಳಲ್ಲಿ ಬಂದಿದ್ದ ಲೋಕಾ ಅಧಿಕಾರಿಗಳಿಂದ ರೇಡ್ ಮಾಡಿದ್ದಾರೆ.
ಇದನ್ನೂ ಓದಿ : ED ರೇಡ್ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೊಂದು ಬಿಗ್ ರೇಡ್ – 11 ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟ ಲೋಕಾಯುಕ್ತ..!