ಬೆಂಗಳೂರು : ED ರೇಡ್ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೊಂದು ಬಿಗ್ ರೇಡ್ ನಡೆದಿದ್ದು, ಇಂದು ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 56 ಕಡೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ.
11 ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗಳ ಮನೆಗಳ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿ ಬಿಗ್ ಶಾಕ್ ಕೊಟ್ಟಿದ್ದು, ರಾಜ್ಯದ 9 ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಲೋಕಾಯುಕ್ತದ ಪೊಲೀಸ್ ವಿಭಾಗದ ಎಸ್ಪಿಗಳೂ ಸೇರಿದಂತೆ 100 ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವ ಅಧಿಕಾರಿಗಳು, ಎಲ್ಲೆಲ್ಲಿ ರೇಡ್ ನಡೆದಿದೆ ಗೊತ್ತಾ?
- ಬಸವರಾಜ್ ಮಾಗಿ- BBMP ಕಂದಾಯ ಅಧಿಕಾರಿ, ಕೆಂಗೇರಿ, ಕಲಬರ್ಗಿ
- ರವೀಂದ್ರಪ್ಪ- ನಿವೃತ್ತ ಚೀಫ್ ಇಂಜಿನಿಯರ್, ಮೈನರ್ ಇರಿಗೇಷನ್, ಚಿತ್ರದುರ್ಗ
- ಶಿವರಾಜ್ – ಎಕ್ಸಿಕ್ಯುಟಿವ್ ಇಂಜಿನಿಯರ್, ಕುಡಿಯುವ ನೀರು-ಒಳಚರಂಡಿ ವಿಭಾಗ, ಮಂಡ್ಯ
- ಉಮೇಶ್- ಎಕ್ಸಿಕ್ಯುಟಿವ್ ಇಂಜಿನಿಯರ್, ದಾವಣಗೆರೆ
- ಶಂಕರ ಗೌಡ ಪಾಟೀಲ್- ಪ್ರಾಜೆಕ್ಟ್ ಡೈರೆಕ್ಟರ್, ಧಾರವಾಡ
- ಮಹಾದೇವ್ ಬನ್ನೂರು- ಅಸ್ಸಿಸ್ಟೆಂಟ್ ಇಂಜಿನಿಯರ್, ಬೆಳಗಾವಿ
- ಮಹೇಶ್- ಸೂಪರಿಂಟೆಂಡೆಂಟ್ ಇಂಜಿನಿಯರ್, ಮೈಸೂರು
- ವಿಜಯಣ್ಣ- ತಹಶೀಲ್ದಾರ್, ಕೋಲಾರ
- ಪ್ರಭಾಕರ್- ಅಸ್ಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್, ದಾವಣಗೆರೆ
- ಜಗದೀಶ್- ಗ್ರೇಡ್ 1 ಸೆಕ್ರೆಟರಿ, ಹಾಸನ
ಈ ಎಲ್ಲ ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸ್ ಎಫ್ಐಆರ್ ದಾಖಲಿಸಿದ್ದಾರೆ. ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ…
ಇದನ್ನೂ ಓದಿ : ED ಸುಳಿಯಲ್ಲಿ ಸಿಲುಕಿರುವ ನಾಗೇಂದ್ರ, ದದ್ದಲ್ಗೆ SIT ಮತ್ತೆ ಶಾಕ್ – ವಿಚಾರಣೆಗೆ ಬರುವಂತೆ ಮೂರನೇ ಬಾರಿ ನೋಟಿಸ್..!