ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮಂತ್ರಿ ಬಿ.ನಾಗೇಂದ್ರ ಹಾಗೂ ಶಾಸಕ ದದ್ದಲ್ಗೆ ಎಸ್ಐಟಿ ಮತ್ತೆ ನೋಟಿಸ್ ನೀಡುವ ಮೂಲಕ ಶಾಕ್ ನೀಡಿದೆ. ನಿನ್ನೆ ವಿಚಾರಣೆಗೆ ಗೈರಾದ ಹಿನ್ನೆಲೆ ನೋಟಿಸ್ ಜಾರಿಗೊಳಿಸಲಾಗಿದ್ದು, ಇಂದು(ಜು.11) ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಈ ಮೂಲಕ ಇಬ್ಬರಿಗೂ ಮೂರನೇ ಬಾರಿ ಎಸ್ಐಟಿ ನೋಟಿಸ್ ಜಾರಿ ಮಾಡಿದಂತಾಗಿದೆ. ಖುದ್ದು ನಾಗೇಂದ್ರ, ದದ್ದಲ್ ಅವರೇ SITಯಿಂದ ನೋಟಿಸ್ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ನಾಗೇಂದ್ರ, ದದ್ದಲ್ SIT ವಿಚಾರಣೆ ಎದುರಿಸಿದ್ದು, ಜುಲೈ 9ರಂದು ನಾಗೇಂದ್ರಗೆ ಸುಮಾರು 8 ಗಂಟೆಗಳ ಕಾಲ SIT ಡ್ರಿಲ್ ನಡೆಸಿತ್ತು. ಅಂದು SIT ಕೇಳಿದ ಸಾಲು ಸಾಲು ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ಕಾರಣ (ಜು.10) ನಿನ್ನೆ ವಿಚಾರಣೆಗೆ ಬರುವಂತೆ SIT ನೋಟಿಸ್ ಕೊಟ್ಟಿತ್ತು. ಆದ್ರೆ ನಿನ್ನೆ ಬೆಳ್ಳಂಬೆಳಗ್ಗೆ ED ರೇಡ್ ಮಾಡಿದ ಕಾರಣದಿಂದಾಗಿ ಇಬ್ಬರೂ ವಿಚಾರಣೆಗೆ ಬಂದಿರಲಿಲ್ಲ.
ಹಾಗಾಗಿ ನಾಗೇಂದ್ರ, ದದ್ದಲ್ ಇಂದು SIT ಮುಂದೆ ವಿಚಾರಣೆಗೆ ಇಂದು ಹಾಜರಾಗ್ತಾರಾ ಎಂಬ ಚರ್ಚೆಗಳು ನಡೆಯುತ್ತಿದ್ದು, ED ವಿಚಾರಣೆ ಮುಂದುವರೆಸಿದ್ರೆ ಎಸ್ಐಟಿ ಮುಂದೆ ಹಾಜರಾಗೋದು ಕಷ್ಟ ಎಂದು ಹೇಳಲಾಗುತ್ತಿದೆ.
ಇನ್ನು, ನಿನ್ನೆ ಮಾಜಿ ಮಂತ್ರಿ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಾಗೇಂದ್ರ ಅವರ ಪಿಎ ಹರೀಶ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಬಳಿಕ ತಡರಾತ್ರಿ ವಿಚಾರಣೆ ಮುಗಿದ ನಂತರ ರಿಲೀಸ್ ವಾಪಸ್ ಕಳುಹಿಸಿದ್ದರು. ಇನ್ನು ಇಲ್ಲಿಯವರೆಗೆ ವಾಲ್ಮೀಕಿ ನಿಗಮ ಹಗರಣ ಕೇಸ್ಗೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ ಎಸ್ಐಟಿಯಿಂದ ಇದುವರೆಗೂ ಒಟ್ಟು 35 ಕೋಟಿಗೂ ಹೆಚ್ಚು ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್ಗಳಲ್ಲಿದ್ದ ಹಣವನ್ನ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ : ಮುಸ್ಲಿಂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೇಸ್ – ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ..!