ಬೆಂಗಳೂರು : ಸಿಲಿಕಾನ್ ಸಿಟಿಯ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಬಿಗ್ ಶಾಕ್ವೊಂದು ಎದುರಾಗಿದೆ. ಇನ್ಮುಂದೆ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕೆಲಸದ ಅವಧಿ 9 ಗಂಟೆ ಬದಲಿಗೆ 14 ಗಂಟೆಗಳ ಕಾಲ ಉದ್ಯೋಗಿಗಳು ಕೆಲಸ ಮಾಡುವ ಕಾನೂನು ತರಲು ಸರ್ಕಾರದ ಮೇಲೆ ಐಟಿ-ಬಿಟಿ ಕಂಪನಿಗಳು ಒತ್ತಡ ಹಾಕಿವೆ. ಇದಕ್ಕೆ ಐಟಿ ನೌಕರರ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಈ ವಿಚಾರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದ ಬಳಿ ಮಾತನಾಡಿದ ಅವರು, ಒಂದು ಇಂಡಸ್ಟ್ರಿ ಕಡೆಯಿಂದ ದಿನಕ್ಕೆ 14 ಗಂಟೆ ಕೆಲಸದ ಅವಧಿ ಫಿಕ್ಸ್ ಮಾಡಲು ಮನವಿ ಬಂದಿದೆ. ಈ ವಿಚಾರವಾಗಿ IT ಎಂಪ್ಲಾಯಿಸ್ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇವೆ ಎಂದಿದ್ದಾರೆ.
ಕೆಲವರು 14 ಗಂಟೆ ಕೆಲಸದ ಅವಧಿ ಪರ ಇದ್ದಾರೆ. ಒಂದಷ್ಟು ಐಟಿ ಉದ್ಯೋಗಿಗಳು ಈ ರೂಲ್ಸ್ ಬೇಡ ಎನ್ನುತ್ತಿದ್ದಾರೆ. ಇಲಾಖೆಯು ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಸಾಧಕ-ಬಾಧಕ, ಅಭಿಪ್ರಾಯಗಳನ್ನು ಪರಿಗಣಿಸುತ್ತೇವೆ. ಇನ್ನೂ ಇಲಾಖೆಯಿಂದ ಅಂತಹ ಯಾವುದೇ ಅಧಿಸೂಚನೆ ಹೊರಡಿಸಿಲ್ಲ ಎಂದು ಸಷ್ಟನೆ ನೀಡಿದ್ದಾರೆ.
ಇನ್ನು ಕಾರ್ಮಿಕ ಇಲಾಖೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದೆ. ಉದ್ಯಮಿಗಳು, ಕಾರ್ಮಿಕ ಸಂಘಟನೆಗಳ ಜೊತೆ ಶೀಘ್ರವೇ ಸಭೆ ಮಾಡಿದ ಬಳಿಕ ನಿರ್ಧಾರಕ್ಕೆ ಬರಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ಹಗರಣ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಸೇರಿದ ಮಾಜಿ ಮಂತ್ರಿ ಬಿ.ನಾಗೇಂದ್ರ..!