Download Our App

Follow us

Home » ಜಿಲ್ಲೆ » ಉಡುಪಿ : ಟಿ20 ವಿಶ್ವಕಪ್ ಫೈನಲ್​​ನಲ್ಲಿ ಭಾರತ ಗೆದ್ದು ಬರಲಿ – ಸ್ಯಾಂಡ್ ಆರ್ಟ್ ಮೂಲಕ ಶುಭಕೋರಿದ ಫ್ಯಾನ್ಸ್..!

ಉಡುಪಿ : ಟಿ20 ವಿಶ್ವಕಪ್ ಫೈನಲ್​​ನಲ್ಲಿ ಭಾರತ ಗೆದ್ದು ಬರಲಿ – ಸ್ಯಾಂಡ್ ಆರ್ಟ್ ಮೂಲಕ ಶುಭಕೋರಿದ ಫ್ಯಾನ್ಸ್..!

ಉಡುಪಿ : ಟಿ20 ವಿಶ್ವಕಪ್ ಫೈನಲ್​​ನಲ್ಲಿ ಟೀಂ ಇಂಡಿಯಾ ಗೆದ್ದು ಬರಲಿ ಎಂದು ಉಡುಪಿಯಲ್ಲಿ ಅಭಿಮಾನಿಗಳು ಸ್ಯಾಂಡ್ ಆರ್ಟ್ ಮೂಲಕ ಶುಭಕೋರಿದ್ದಾರೆ. ಉಡುಪಿಯ ಕೋಟೇಶ್ವರ ಕಡಲ ತೀರದಲ್ಲಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಜೈ ಹೋ ಇಂಡಿಯಾ ಕಲಾಕೃತಿ‌ ರಚಿಸಿದ್ದಾರೆ.

ಇನ್ನು ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ಇಂದು ರಾತ್ರಿ 8 ಗಂಟೆಗೆ ದಕ್ಷಿಣ ಆಫ್ರಿಕಾ -ಭಾರತ ಫೈನಲ್​​ನಲ್ಲಿ ಸೆಣೆಸಾಡಲಿವೆ. ಎರಡೂ ತಂಡಗಳೂ ಬಲಾಡ್ಯ ತಂಡಗಳಾಗಿದ್ದರೂ ಭಾರತದ ಕೈ ಮೇಲಾಗಿದೆ. 10 ವರ್ಷದ ನಂತರ ಎರಡನೇ ಬಾರಿ ಚುಟುಕು ವಿಶ್ವಕಪ್​​ ಫೈನಲ್​ಗೆ ಬಂದು ಗೆಲ್ಲುವ ಹುಮ್ಮಸ್ಸಿನಲ್ಲಿ ಭಾರತವಿದೆ.

ಇದೇ ಮೊದಲ ಬಾರಿ ವಿಶ್ವಕಪ್​​​ ಫೈನಲ್​ಗೆ ದಕ್ಷಿಣ ಆಫ್ರಿಕಾ ಲಗ್ಗೆ ಇಟ್ಟಿದೆ. ಎರಡೂ ತಂಡಗಳು 26 ಪಂದ್ಯಗಳನ್ನಾಡಿವೆ. 14ರಲ್ಲಿ ಭಾರತ, 11ರಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿದೆ. 2007ರಲ್ಲಿ ಚೊಚ್ಚಲ ಕಪ್​ ಗೆದ್ದಿದ್ದ ಟೀಂ ಇಂಡಿಯಾ, 17 ವರ್ಷಗಳ ಬಳಿಕ ಕಪ್​ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಸೌತ್​ ಆಫ್ರಿಕಾ ನೆಲದಲ್ಲೇ ಧೋನಿ ನಾಯಕತ್ವದಲ್ಲಿ ಭಾರತ ಕಪ್​ ಬಾಚಿಕೊಂಡಿತ್ತು.

ಇದನ್ನೂ ಓದಿ : ಗದಗ : ಆರೋಪಿಯನ್ನು ಕರೆದೊಯ್ಯೋ ವೇಳೆ ಪೊಲೀಸರ ಮೇಲೆ ದುಷ್ಕರ್ಮಿಗಳಿಂದ ಅಟ್ಯಾಕ್..!

 

 

 

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here