ಬೆಂಗಳೂರು : ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಪ್ರಕರಣ ನಡೆದಿದೆ. ಕಾರು ಬಾನೆಟ್ ಮೇಲೆ ಕುಳಿತವನ ಎಳೆದೊಯ್ದು ಪುಂಡಾಟ ಮಾಡಿದ್ದಾರೆ. ಬಾನೆಟ್ ಮೇಲೆ ಮಲಗಿದ್ರೂ ಕಾರು ಚಲಾಯಿಸಿ ಹುಚ್ಚಾಟ ನಡೆಸಿದ್ದಾರೆ. ಡ್ರೈವರ್ 400 ಮೀಟರ್ನಷ್ಟು ದೂರ ಬಾನೆಟ್ ಮೇಲೆ ಎಳೆದೊಯ್ದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರು ಡ್ರೈವರ್ ಮೊಹಮ್ಮದ್ ಮುನೀರ್ ಎಂಬಾತನಿಂದ ಈ ಕೃತ್ಯ ನಡೆದಿದ್ದು, ಕ್ಯಾಬ್ ಚಾಲಕ ಅಶ್ವತ್ಥ್ನನ್ನು ಮುನೀರ್ ಬಾನೆಟ್ ಮೇಲೆ ಹೊತ್ತೊಯ್ದಿದ್ದಾನೆ. ಜನವರಿ 15ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಲ್ ಮಾರಮ್ಮ ವೃತ್ತದಲ್ಲಿ ಕಿರಿಕ್ ನಡೆದಿತ್ತು.
ಕಾರ್ ನಿಲ್ಲಿಸದೇ ಎಸ್ಕೇಪ್ ಆಗಲು ಕಾರ್ ಡ್ರೈವರ್ ಯತ್ನಿಸಿದ್ದು, ಬ್ಯಾನೆಟ್ ಮೇಲೆ ಕುಳಿತು ಕ್ಯಾಬ್ ಚಾಲಕ ಅಶ್ವತ್ಥ್ ತಡೆದಿದ್ದರು. 18ನೇ ಕ್ರಾಸ್ ಸಿಗ್ನಲ್ವರೆಗೂ ಬ್ಯಾನೆಟ್ ಮೇಲೆ ಎಳೆದೊಯ್ದಿದ್ದು, ಸಡನ್ ಆಗಿ ಬ್ರೇಕ್ ಹಾಕಿ ಕೆಳಗೆ ಬಿಳಿಸಲು ಯತ್ನಿಸಿದ್ದಾನೆ.
ಈ ವೇಳೆ ಸ್ಥಳೀಯರು ಕಾರ್ ಅಡ್ಡಗಟ್ಟಿ ಮುನೀರ್ನನ್ನು ಹಿಡಿದಿದ್ದರು, ಮಲ್ಲೇಶ್ವರಂ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ವಶಕ್ಕೆ ಪಡೆದಿದ್ದರು. ಪೊಲೀಸರು NCR ದಾಖಲು ಮಾಡಿ ಡ್ರೈವರ್ಗಳನ್ನು ಬಿಟ್ಟು ಕಳಿಸಿದ್ದರು.
ಇದನ್ನೂ ಓದಿ : ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : 5 ಕೋಟಿ ರೂ. ವ್ಯಾಜ್ಯ ಶುಲ್ಕವಾಗಿ ಕರ್ನಾಟಕಕ್ಕೆ ಪಾವತಿಸಲು ಆದೇಶ..!