ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಧಾರಾಕಾರ ಮಳೆ ಹಿನ್ನಲೆ ಬೆಸ್ಕಾಂ ಹೆಲ್ಪ್ ಲೈನ್ ನಂಬರ್ 1912 ಗೆ ದೂರುಗಳ ಸುರಿಮಳೆ ಬಂದಿದ್ದು, ವಿದ್ಯುತ್ ಕಡಿತ ಸೇರಿದಂತೆ ಬರೋಬ್ಬರಿ 8745 ದೂರುಗಳು ಬೆಸ್ಕಾಂ ಹೆಲ್ಪ್ ಲೈನ್ ಬಂದಿವೆ.
ಸತತ ಎರಡು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಿದೆ. ನಿನ್ನೆ ಸಂಜೆ ಬಳಿಕ ಜೋರು ಗಾಳಿ ಜೊತೆಗೆ ಧಾರಾಕಾರ ಮಳೆ ಸುರಿಯುತ್ತಿದ್ದು, ಗಾಳಿ ಆರ್ಭಟಕ್ಕೆ ಹಲವೆಡೆ ಮರಗಳು ರಸ್ತೆಗುರುಳಿದ್ದು, ಸಂಚಾರಕ್ಕೆ ಭಾರೀ ಅಡ್ಡಿಯಾಗಿತ್ತು.
ಭಾರಿ ಮಳೆಯಿಂದ ವಿದ್ಯುತ್ ಕಡಿತದಿಂದ ಬೆಸ್ಕಾಂ ಗೆ ಗ್ರಾಹಕರು ದೂರು ನೀಡಿದ್ದಾರೆ. ಇನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ 74 ವಿದ್ಯುತ್ ಕಂಬಗಳು ಧರಗುಳಿದಿದ್ದು, 102 ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿವೆ. ಇದರೊಂದಿಗೆ 9 ಟ್ರಾನ್ಸ್ ಫಾರ್ಮರ್ಗಳಿಗೆ ಮಳೆಯಿಂದ ಹಾನಿಯಾಗಿದೆ. ಈ ಎಲ್ಲ ಅವಾಂತರದಿಂದ ಬೆಸ್ಕಾಂಗೆ ಕೋಟ್ಯಾಂತರ ರೂ ನಷ್ಟ ಸಂಭವಿಸಿದೆ.
ಇದನ್ನೂ ಓದಿ : ಪ್ರಜ್ವಲ್ ಗೆಲ್ಲುವ ಮುನ್ಸೂಚನೆ ಸಿಗ್ತಿದ್ದಂತೆ SITಗೆ ಟೆನ್ಷನ್ – ರಿಸಲ್ಟ್ ಬರುವ ಮುನ್ನವೇ ಸ್ಥಳ ಮಹಜರ್ಗೆ ಪ್ಲಾನ್..!